ಮತ್ತೆ ನಾಗರಹಾವನ್ನು ಅಟಕಾಯಿಸಿದ ಶ್ವಾನಪಡೆ!
ವಿಜಯಸಾಕ್ಷಿ ಸುದ್ದಿ, ನರಗುಂದ
ಡಾ. ಸಂಗಮೇಶ ಕೊಳ್ಳಿಯವರ ಕಾಂಗ್ರೆಸ್ ಕಛೇರಿಯ ಆವರಣದಲ್ಲಿ ಮತ್ತೊಮ್ಮೆ ಭಾರೀ ಗಾತ್ರದ ನಾಗರಹಾವೊಂದು ಪ್ರತ್ಯಕ್ಷವಾಗಿದ್ದು, ಕಾಂಪೌಂಡಿನಲ್ಲಿದ್ದ ನಾಯಿಗಳ ಗುಂಪು ನಾಗರ ಹಾವಿನ ಬೆನ್ನಟ್ಟಿತ್ತು.
ಎಷ್ಟೇ ಕೂಗಿ ಪಕ್ಕಕ್ಕೆ ಕರೆದರೂ, ಆವೇಶದಿಂದ ಹಾವಿನ ಬೆನ್ನು ಬಿದ್ದಿದ್ದವು. ಪಾಪ, ಆ ನಾಗರಹಾವಂತೂ ಕಂಗಾಲಾಗಿ, ತಪ್ಪಿಸಿಕೊಳ್ಳಲು ದಿಕ್ಕು ತೋಚದೇ, ಇಡೀ ಆವರಣವನ್ನು ಸುತ್ತುಹಾಕುತ್ತಲೇ ಇತ್ತು.
ಕೆಲಕಾಲ ಇವೆಲ್ಲ ವಿದ್ಯಮಾನವನ್ನು ಗಮನಿಸಿದ ಸ್ಥಳೀಯರು, ಹಾವಿಗೆ ನಾಯಿಗಳ ಗುಂಪಿನಿಂದ ಆಗಬಹುದಾದ ಅಪಾಯವನ್ನು ಮನಗಂಡು, ಉರಗ ತಜ್ಞ ಸ್ನೇಕ್ ಬುಡ್ಡಾರನ್ನು ಸ್ಥಳಕ್ಕೆ ಕರೆಯಿಸಿದರು.
ಸ್ನೇಕ್ ಬುಡ್ಡಾ ಹಾವನ್ನು ಸುರಕ್ಷಿತವಾಗಿ ಹಿಡಿದು, ಕಾಡಿನಲ್ಲಿ ಬಿಟ್ಟುಬಂದಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಮಧ್ಯರಾತ್ರಿಯ ಸಮಯದಲ್ಲಿ ಇದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದ ನಾಗರಹಾವನ್ನು ನಾಯಿಗಳು ರೋಷದಿಂದ ಸುತ್ತುವರೆದಿದ್ದ ಘಟನೆಯನ್ನು ನೆನಪಿಸಿಕೊಳ್ಳಬಹುದು.