HomeSports Newsಆರೆಂಜ್ ಕ್ಯಾಪ್ ರೇಸ್ʼನಿಂದ ವಿರಾಟ್ ಕೊಹ್ಲಿ ಔಟ್: ಫೈನಲ್ʼಗೂ ಮುನ್ನ ಮೂವರ ನಡುವೆ ಪೈಪೋಟಿ

ಆರೆಂಜ್ ಕ್ಯಾಪ್ ರೇಸ್ʼನಿಂದ ವಿರಾಟ್ ಕೊಹ್ಲಿ ಔಟ್: ಫೈನಲ್ʼಗೂ ಮುನ್ನ ಮೂವರ ನಡುವೆ ಪೈಪೋಟಿ

For Dai;y Updates Join Our whatsapp Group

Spread the love

ಅಹಮದಾಬಾದ್: ಐಪಿಎಲ್ 2026ರ ಆರೆಂಜ್ ಕ್ಯಾಪ್ ಸ್ಪರ್ಧೆಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬಹುತೇಕ ಹೊರಬಿದ್ದಿದ್ದಾರೆ. ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ ಈ ಬಾರಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವುದು ಕೊಹ್ಲಿಗೆ ಕಷ್ಟಕರವಾಗಿದೆ.

ಈ ಸೀಸನ್‌ನಲ್ಲಿ 15 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರುವ ವಿರಾಟ್ ಕೊಹ್ಲಿ 600 ರನ್ ಕಲೆಹಾಕಿದ್ದಾರೆ. ಆದರೆ ಪ್ರಸ್ತುತ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್‌ನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ 776 ರನ್‌ಗಳೊಂದಿಗೆ ಮುಂಚೂಣಿಯಲ್ಲಿದ್ದಾರೆ.

ಹೀಗಾಗಿ ವೈಭವ್ ಅವರನ್ನು ಹಿಂದಿಕ್ಕಲು ಕೊಹ್ಲಿಗೆ ಫೈನಲ್‌ನಲ್ಲಿ 177 ರನ್ ಗಳಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕಾರಣದಿಂದಾಗಿ ಇದೀಗ ಆರೆಂಜ್ ಕ್ಯಾಪ್‌ಗಾಗಿ ಪೈಪೋಟಿ ಮುಖ್ಯವಾಗಿ ಮೂವರು ಆಟಗಾರರ ನಡುವೆ ಸೀಮಿತವಾಗಿದೆ.

1. ವೈಭವ್ ಸೂರ್ಯವಂಶಿ – 776 ರನ್

ರಾಜಸ್ಥಾನ್ ರಾಯಲ್ಸ್ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 16 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಹಾಗೂ ಐದು ಅರ್ಧಶತಕಗಳ ನೆರವಿನಿಂದ 776 ರನ್ ಕಲೆಹಾಕಿ ಅಗ್ರಸ್ಥಾನದಲ್ಲಿದ್ದಾರೆ.

2. ಶುಭ್ಮನ್ ಗಿಲ್ – 722 ರನ್

ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 15 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಆರು ಅರ್ಧಶತಕಗಳೊಂದಿಗೆ 722 ರನ್ ಗಳಿಸಿರುವ ಗಿಲ್, ಫೈನಲ್‌ನಲ್ಲಿ ಇನ್ನೂ 55 ರನ್ ಗಳಿಸಿದರೆ ವೈಭವ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಬಹುದು.

3. ಸಾಯಿ ಸುದರ್ಶನ್ – 710 ರನ್

ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಕೂಡ ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಉಳಿದಿದ್ದಾರೆ. 16 ಇನ್ನಿಂಗ್ಸ್‌ಗಳಲ್ಲಿ 710 ರನ್ ಕಲೆಹಾಕಿರುವ ಸುದರ್ಶನ್, ಫೈನಲ್ ಪಂದ್ಯದಲ್ಲಿ 67 ರನ್ ಗಳಿಸಿದರೆ ವೈಭವ್ ಸೂರ್ಯವಂಶಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ.

ಫೈನಲ್ ಪಂದ್ಯದಲ್ಲೇ ನಿರ್ಧಾರ

ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯವು ಕೇವಲ ಚಾಂಪಿಯನ್ ತಂಡವನ್ನು ಮಾತ್ರವಲ್ಲ, ಈ ಬಾರಿಯ ಆರೆಂಜ್ ಕ್ಯಾಪ್ ವಿಜೇತನನ್ನೂ ನಿರ್ಧರಿಸಲಿದೆ. ವೈಭವ್ ಸೂರ್ಯವಂಶಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವುದರಿಂದ, ಗಿಲ್ ಮತ್ತು ಸುದರ್ಶನ್ ಅವರಿಗೆ ಕೊನೆಯ ಪಂದ್ಯದಲ್ಲಿ ಅಗ್ರಸ್ಥಾನ ಕಸಿದುಕೊಳ್ಳುವ ಅವಕಾಶವಿದೆ.

ಹೀಗಾಗಿ ಐಪಿಎಲ್ 2026ರ ಆರೆಂಜ್ ಕ್ಯಾಪ್ ಯಾರ ತಲೆಯ ಮೇಲೆ ಅಲಂಕರಿಸಲಿದೆ ಎಂಬ ಕುತೂಹಲ ಇದೀಗ ಫೈನಲ್ ಪಂದ್ಯದ ಮೇಲೆ ಕೇಂದ್ರೀಕೃತವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!