ನೇಣುಬಿಗಿದ ಸ್ಥಿತಿಯಲ್ಲಿ ಯುವ ವಕೀಲೆ ಶವ ಪತ್ತೆ!? ಹೆಣ ನೋಡಿ ಮತ್ತೋರ್ವ ಸೂಸೈಡ್!- ಕೊಲೆ ಶಂಕೆ!?

0
Spread the love

ನೆಲಮಂಗಲ:- ನೇಣುಬಿಗಿದ ಸ್ಥಿತಿಯಲ್ಲಿ ವಕೀಲೆ ಶವ ಪತ್ತೆಯಾಗಿದ್ದು, ಹೆಣ ನೋಡಿದ ಮತ್ತೋರ್ವ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

Advertisement

ವಕೀಲೆ ರಮ್ಮಾ(26) ಹಾಗೂ ಪುನೀತ್(25) ಮೃತರು. ಇಲ್ಲಿನ ಶ್ರೀನಿವಾಸಪುರ ಶೆಡ್ ನಲ್ಲಿ ವಕೀಲೆ ರಮ್ಯಾ
ಮೃತದೇಹ ಪತ್ತೆಯಾದರೆ, ಕೆಂಪಲಿಂಗನಹಳ್ಳಿಯ ಮನೆಯಲ್ಲಿ ಪುನೀತ್ ಮೃತದೇಹ ಪತ್ತೆಯಾಗಿದೆ. ರಮ್ಯಾ ಸಾವಿಗೆ ಉದ್ಯಮಿ ದಿನೇಶ್ ಕಾರಣ ಅಂತ ರಮ್ಯಾ ಮಾವನಿಗೆ ಮೃತ ಪುನೀತ್ ವಾಯ್ಸ್ ಮೆಸೇಜ್ ಕಳುಹಿಸಿ ಸಾವನ್ನಪ್ಪಿದ್ದಾರೆ. ತಾಯಿ ಸಮಾಧಿ ನಿರ್ಮಾಣ ವೇಳೆ ರಮ್ಯಾಗೆ ಗ್ರಾನೈಟ್ ಕಲ್ಲು ವ್ಯವಹಾರ ಮಾಡ್ತಿದ್ದ ದಿನೇಶ್ ಪರಿಚಯವಾಗಿದೆ. ಇದೀಗ ಈ ಉದ್ಯಮಿ ಮೇಲೆ ಆರೋಪ ಕೇಳಿ ಬಂದಿದ್ದು, ಎಲ್ಲಾ ರೀತಿಯಲ್ಲೂ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

ಆರೋಪಿ ಸ್ಥಾನದಲ್ಲಿರುವ ಉದ್ಯಮಿ ದಿನೇಶ್, ಶೆಡ್ ಬಳಿ ಬಂದು ರಮ್ಯಾರನ್ನ ಕೊಂದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮೃತದೇಹ ಕಂಡಿದ್ದ ಪ್ರಮುಖ ಸಾಕ್ಷಿಯಾಗಿದ್ದ ಪುನೀತ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಮೃತ ರಮ್ಯಾ ಪೋಷಕರು ಕೊಟ್ಟ ದೂರಿನ ಮೇರೆಗೆ ನೆಲಮಂಗಲ ಗ್ರಾಮಾಂತರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ದಿನೇಶ್ ಪತ್ತೆಗಾಗಿ ವ್ಯಾಪಕ ಶೋಧ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here