ಬೆಂಗಳೂರು:- ಪ್ರಯಾಣಿಕರಿಂದ ಹೆಚ್ಚು ಹಣ ಪೀಕುತ್ತಿರುವ ಓಲಾ, ಊಬರ್ ಮತ್ತು ನಮ್ಮ ಯಾತ್ರಿಯಂತಹ ಅಗ್ರಿಗೇಟರ್ ಕಂಪನಿಗಳ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಆನ್ಲೈನ್ ಸಂಸ್ಥೆಗಳು ಆಟೋ ಪ್ರಯಾಣ ದರವನ್ನು ಒನ್ಟು ತ್ರಿಬಲ್ ಪಡೆಯುತ್ತಿದ್ದರೂ ಸಾರಿಗೆ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ನಿಯಮದ ಪ್ರಕಾರ ಮೊದಲ ಎರಡು ಕಿಲೋ ಮೀಟರ್ 30 ರೂ. ಪಡೆಯಬೇಕು. ನಂತರ ಪ್ರತೀ ಕಿಲೋ ಮೀಟರ್ಗೆ 15 ರೂಪಾಯಿ ಪಡೆಯಬೇಕು. ಉದಾಹರಣೆಗೆ, ಸೌಂತ್ ಎಂಡ್ ಟು ಯಡಿಯೂರು ಕೆರೆ (657 ಮೀಟರ್) ದೂರದ ಪ್ರಯಾಣಕ್ಕೆ ನಿಮಯದ ಪ್ರಕಾರ 30 ರೂ. ಪಡೆಯಬೇಕು. ಆದರೆ, 55 ರೂಪಾಯಿ ಪಡೆಯಲಾಗುತ್ತಿದೆ. ಮೆಜೆಸ್ಟಿಕ್ನಿಂದ ರಾಜಾಜಿನಗರ (3.71 ಕಿ.ಮೀ) ದೂರದ ಪ್ರಯಾಣಕ್ಕೆ ನಿಯಮದ ಪ್ರಕಾರ 50-60 ರೂಪಾಯಿ ಪಡೆಯಬೇಕು. ಆದರೆ, 93 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಸೌತ್ ಎಂಡ್ ಸರ್ಕಲ್ನಿಂದ ಮೆಜೆಸ್ಟಿಕ್ಗೆ (6.4 ಕಿ.ಮೀ) ದೂರದ ಪ್ರಯಾಣಕ್ಕೆ ನಿಯಮದ ಪ್ರಕಾರ 90-100 ರೂಪಾಯಿ ಪಡೆಯಬೇಕು ಆದರೆ, 125 ರೂಪಾಯಿ ಪಡೆಯಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಇಲಾಖೆಯ ಅಡಿಷನಲ್ ಕಮೀಷನರ್ ಮಲ್ಲಿಕಾರ್ಜುನ ಮಾತನಾಡಿ, ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದರೆ ಅಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.