30.8 C
Gadag
Monday, May 29, 2023

ಅಡ್ನೂರು ಶ್ರೀ ಲಿಂಗೈಕ್ಯ: ತೋಂಟದ ಶ್ರೀಗಳ ಕಂಬನಿ

Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಭಕ್ತಾನುರಾಗಿಗಳು ಮತ್ತು ಸರಳ ಸಜ್ಜನಿಕೆಗೆ ಹೆಸರಾದ ಅಡ್ನೂರಿನ ದಾಸೋಹ ಮಠದ ಶ್ರೀ ಪಂಚಾಕ್ಷರ ಶಿವಾಚಾರ್ಯರು ಲಿಂಗೈಕ್ಯರಾದುದಕ್ಕೆ ಡಂಬಳ-ಗದಗ ಮಠದ ಶ್ರೀ ಜಗದ್ಗುರು ಡಾ| ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಂಬನಿ ಮಿಡಿದಿದ್ದಾರೆ.
ಸಿಂದಗಿಯ ಲಿಂ. ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಶಿಷ್ಯರಾಗಿದ್ದ ಶ್ರೀ ಪಂಚಾಕ್ಷರ ಶಿವಾಚಾರ್ಯರು ಅತ್ಯಂತ ಆಚಾರನಿಷ್ಠರಾಗಿದ್ದರು. ಗ್ರಾಮೀಣ ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಗಲಿರುಳೂ ಶ್ರಮಿಸುತ್ತಿದ್ದರು. ಯಲಬುರ್ಗಾ ತಾಲೂಕಿನ ರಾಜೂರಿನಲ್ಲಿ ಸತತ ಮೂರು ದಶಕಗಳ ಕಾಲ ಪುರಾಣ ಪ್ರವಚನಗಳನ್ನು ನಡೆಸುತ್ತ, ಜನರಲ್ಲಿ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದ್ದರು.
ತಮ್ಮ ಹಾಗೂ ಪುಟ್ಟರಾಜ ಕವಿ ಗವಾಯಿಗಳವರೊಂದಿಗೆ ಹಾರ್ದಿಕ ಸಂಬಂಧವನ್ನು ಹೊಂದಿದ್ದ, ಶ್ರೀಗಳು ಶಿಷ್ಯರ ಮೇಲೆ ಅಪಾರ ಅಂತಃಕರಣವುಳ್ಳವರಾಗಿದ್ದರು. ಪೂಜ್ಯರ ಅಗಲುವಿಕೆ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ ಎಂದು ತೋಂಟದಾರ್ಯ ಮಠದ ಶ್ರೀಗಳು ತಮ್ಮ ಶೋಕ ಸಂತಾಪದಲ್ಲಿ ತಿಳಿಸಿದ್ದಾರೆ.


Spread the love

Related Posts

LEAVE A REPLY

Please enter your comment!
Please enter your name here

Stay Connected

0FansLike
3,790FollowersFollow
0SubscribersSubscribe
- Advertisement -spot_img

Latest Posts