ಅಮಾನತ್ತಾದ ಸಂಸದರಿಂದ ಸಂಸತ್ ಲಾನ್‌ನಲ್ಲಿ ಅಹೋರಾತ್ರಿ ಧರಣಿ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಸೋಮವಾರ ರಾಜ್ಯಸಭೆಯಲ್ಲಿ ವಾರ ಕಾಲ ಅಮಾನತ್ತಾದ 8 ಸಂಸದರು ಸಂಸತ್ ಆವರಣದ ಹುಲ್ಲುಹಾಸಿನಲ್ಲಿ ತಮ್ಮ ಪ್ರತಿಭಟನೆಯನ್ನು ಇನ್ನೂ ಮುಂದುವರೆಸಿದ್ದಾರೆ.

ಮಂಗಳವಾರ ಮುಂಜಾನೆ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಸಂಸದರ ಬಳಿ ಹೋಗಿ ಚಹಾ ಸೇವಿಸಲು ಕೋರಿದರು. ಉಪ ಸಭಾಪತಿಯವರ ‘ಟೀ-ಪಾರ್ಟಿ’ ನಿರಾಕರಿಸಿದ ಎಂಟೂ ಸಂಸದರು ಅವರನ್ನು ‘ರೈತ ವಿರೋಧಿ’ ಎಂದು ಟೀಕಿಸಿದರು.

ಭಾನುವಾರ 2 ಕೃಷಿ ಮಸೂದೆಗಳನ್ನು ಭೌತಿಕ ಮತದಾನದ ಬದಲು ಧ್ವನಿಮತಕ್ಕೆ ಹಾಕಿದ್ದನ್ನು ವಿರೋಧಿಸಿ ವಿಪಕ್ಷ ಸಂಸದರು ರಾಜ್ಯಸಭೆಯಲ್ಲಿ ಪ್ರತಿಭಟನೆ, ಗದ್ದಲ ನಡೆಸಿದ್ದರು. ಸೋಮವಾರ ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು 8 ವಿಪಕ್ಷ ಸಂಸದರನ್ನು 7 ದಿನದವರೆಗೆ ಕಲಾಪದಿಂದ ಅಮಾನತ್ತು ಮಾಡಿದ್ದರು.

ಈ ಸಂಸದರು ಕಲಾಪ ತೊರೆಯಲು ನಿರಾಕರಿಸಿದಾಗ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು.
ನಂತರ ಈ ಸಂಸದರು ಸಂಸತ್ ಆವರಣದ ಹುಲ್ಲುಹಾಸಿನನಲ್ಲಿ ‘ರೈತ ವಿರೋಧಿ ಸರ್ಕಾರ’ ಎಂಬ ಪ್ಲೆಕಾರ್ಡ್ ಹಿಡಿದು ಕುಳಿತುಕೊಂಡು ಪ್ರತಿಭಟನೆ ನಡೆಸುತ್ತಿದ್ದು, ರಾತ್ರಿಯಿಡಿ ಲಾನ್‌ನಲ್ಲೇ ಕಳೆದಿದ್ದಾರೆ.


Spread the love

LEAVE A REPLY

Please enter your comment!
Please enter your name here