ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಅವರು ತಾಲೂಕು ಆಡಳಿತ ಮತ್ತು ಕಾರಟಗಿ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ತಹಸೀಲ್ದಾರ್ ಕವಿತಾ, ಮುಖ್ಯಾಧಿಕಾರಿ ಶಿವಲಿಂಗಪ್ಪ, ತಾ. ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಸೋಮಶೇಖರಗೌಡ ಎಪಿಎಂಸಿ ಅಧ್ಯಕ್ಷರು, ಸದಸ್ಯರಾದ ನಾಗರಾಜ್ ಅರಳಿ, ಜೆ ತಿಮ್ಮನಗೌಡ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ, ಪಿಎಸ್ಐ ಅವಿನಾಶ್ ಕಾಂಬ್ಳೆ, ಅರೋಗ್ಯ ರಕ್ಷಾ ಸಮಿತಿಯ ಶರಣಪ್ಪ ಗದ್ದಿ,ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ನಾಗರಾಜ ಬಿಲ್ಗಾರ್, ರಮೇಶ್ ನಾಡಿಗೇರ್, ಶಾಂತಾ ಪವಾರ್, ರತ್ನಕುಮಾರಿ, ಪ್ರಭುರಾಜ್ ಬೂದಿ, ಮರಿಯಪ್ಪ ಸಾಲೋಣಿ, ಮಂಜುನಾಥ್ ಮಾಲಿಪಾಟೀಲ್, LVT ಸೂಗಪ್ಪ, ಮಲ್ಲಮ್ಮ ಕನಕರೆಡ್ಡಿ, ಮತ್ತಿತರ ಮುಖಂಡರು ಇದ್ದರು.