ದಾಸೋಹದಿಂದ ನೆಮ್ಮದಿಯ ಬದುಕು : ಎಸ್.ವ್ಹಿ. ಸಂಕನೂರ

0
sankanur
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬಸವಣ್ಣನವರ ಆಚಾರ-ವಿಚಾರಗಳನ್ನು ವಿದೇಶಿಗರು ಕೂಡಾ ಪಾಲಿಸುತ್ತಿದ್ದಾರೆ. ದಾಸೋಹ ಎಂದರೆ ಇಂದು ಮಠ-ಮಂದಿರಗಳಲ್ಲಿ ನಡೆಯುವ ಪ್ರಸಾದ ವಿತರಣೆ ಮಾತ್ರವಲ್ಲ, ದಾಸೋಹ ಎಂದರೆ ನಾವು ದುಡಿದಿದ್ದರಲ್ಲಿ ಅಲ್ಪವನ್ನಾದರೂ ಸಮಾಜಕ್ಕೆ ಅರ್ಪಿಸಬೇಕು. ದೀನ ದಲಿತರು, ಬಡವರು ಹಾಗೂ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನತೆಗೆ ನಮ್ಮ ಆದಾಯದಲ್ಲಿ ಹಂಚಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ, ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಅಭಿಪ್ರಾಯಪಟ್ಟರು.

Advertisement

ಭಾರತೀಯ ಜನತಾ ಪಾರ್ಟಿಯ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಗುರು, ಮಹಾಮಾನತವಾದಿ ಶ್ರೀ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಮಾತನಾಡಿ, ಬಸವಣ್ಣನವರು ಕಾಯಕಕ್ಕೆ ಹೆಚ್ಚಿನ ಆದ್ಯತೆ ನೀಡಿದರು.

ಕಾಯಕ ಎಂದರೆ ಕಸಬು, ಕೆಲಸ, ದುಡಿಮೆ, ವೃತ್ತಿ ಎಂದು ಹೇಳಿದರು. ಕಾಯಕವೇ ಕೈಲಾಸ ಎಂದು ನಂಬಿ ನಾವು ಮಾಡುವ ಯಾವುದೇ ಉದ್ಯೋಗವಿದ್ದರೂ ಅದರಲ್ಲಿ ಪ್ರಾಮಾಣಿಕತೆ, ನಿಷ್ಠುರತೆ ಇರಬೇಕು. ಇದನ್ನು ಬಿಟ್ಟು ಬೇರೆಯವರಿಗೆ ನಮ್ಮ ಕಾಯಕದಿಂದ ನೋವಾಗಬಾರದು ಎಂದರು.

ಹಿರಿಯರಾದ ಎಂ.ಎಸ್. ಕರೀಗೌಡ್ರ ಮಾತನಾಡಿ, ಬಸವಣ್ಣನವರ ವಚನಗಳನ್ನು, ಕನಕದಾಸರ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾಯಕದಲ್ಲಿ ನಿರತನಾದರೆ ಗುರುದರ್ಶನವನ್ನು ಮರೆಯಬೇಕು, ಲಿಂಗ ಪೂಜೆಯಾದರೂ ಮರೆಯಬೇಕು, ಜಂಗಮ ಮುಂದಿದ್ದರೂ ಹಂಗು ಹರಿಯಬೇಕು, ಕಾಯಕಕ್ಕಿಂತ ಗುರು, ಲಿಂಗ, ಜಂಗಮ ಇರ‍್ಯಾರೂ ದೊಡ್ಡವರಲ್ಲ. ಕಾಯಕದಲ್ಲಿ ಎಲ್ಲವೂ ಇದೆ ಎಂದರು.

ಈ ಸಂದರ್ಭದಲ್ಲಿ ಸಿದ್ದು ಪಲ್ಲೇದ, ಅಶೋಕ ಸಂಕಣ್ಣವರ, ಭೀಮಸಿಂಗ ರಾಠೋಡ, ಕೆ.ಕೆ. ಮಳಗೌಡ್ರ, ಕೆ.ಪಿ. ಕೊಟಿಗೌಡ್ರ, ಸುಧೀರ ಕಾಟಿಗರ, ಮಂಜುನಾಥ ಶಾಂತಗೇರಿ, ಸಂತೋಷ ಅಕ್ಕಿ, ರಾಜೇಶ ಕಟ್ಟಿಮನಿ, ಸಂತೋಷ ಕಲ್ಯಾಣಿ, ವಿಶ್ವನಾಥ ಶಿರಿಗಣ್ಣವರ, ಎಸ್.ಕೆ. ಉಮಚಗಿ, ರವಿ ಮಾನ್ವಿ, ಮಾಂತೇಶ ಬಾತಾಖಾನಿ, ಶಾಂತೇಶ ಚವಡಿ, ಯೋಗೇಶ್ವರಿ ಭಾವಿಕಟ್ಟಿ, ವಿನೋದ ಹಂಸನೂರ ಮುಂತಾದವರು ಭಾಗವಹಿಸಿದ್ದರು.

ಬಿಜೆಪಿ ನಗರಾಧ್ಯಕ್ಷ ಅನಿಲ ಅಬ್ಬಿಗೇರಿ ಸ್ವಾಗತಿಸಿ ವಂದಿಸಿದರು. ರಮೇಶ ಸಜ್ಜಗಾರ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, 12ನೇ ಶತಮಾನದಲ್ಲಿ ಜಾತಿ, ಜಾತಿಯ ನಡುವೆ ಸಂಘರ್ಷಗಳಿದ್ದವು. ಯಾವ ಜಾತಿಯೂ ಮೇಲಲ್ಲ, ಕೀಳಲ್ಲ. ದಲಿತರಿಗೂ ಕೂಡ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವ ಹಾಗೆ ಮಾಡಿದವರು ಬಸವಣ್ಣ. 12ನೇ ಶತಮಾನದಲ್ಲಿಯ ಶಿವಶರಣ-ಶರಣೆಯರು ಕಾಯಕ ದಾಸೊಹಗಳನ್ನು ನಂಬಿ ಅವುಗಳ ಸವಿಯನ್ನು ಅನುಭವಿಸಿ ಸಾರ್ಥಕ ಬದುಕನ್ನು ಸಾಧಿಸಿ ಮನುಕುಲಕ್ಕೆ ಮಾದರಿಯಾಗಿದ್ದಾರೆ. ಶರಣರು ಕಾಯಕ ದಾಸೋಹದ ಬಗ್ಗೆ ಕೇವಲ ವಚನಗಳನ್ನು ರಚಿಸಲಿಲ್ಲ. ಬದಲಿಗೆ ನುಡಿದಂತೆ ನಡೆದು ತಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿ ಬದುಕಿದರು.

ಅವರ ತತ್ವ ಆಚರಣೆಗಳು ಇಂದಿಗೂ ನಮ್ಮ ಬದುಕಿಗೆ ದಾರಿದೀಪವಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here