ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ವೀರಶೈವ ಸಮಾಜದ ಒಳಪಂಗಡಗಳನ್ನು ಒಗ್ಗೂಡಿಸಿಕೊಂಡು ಸಮಾಜದ ಏಳ್ಗೆಗಾಗಿ ವೀರಶೈವ ಮಹಾಸಭಾ ಶ್ರಮಿಸುತ್ತಿದೆ ಎಂದು ತೆಗ್ಗಿನಮಠದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕೆಂಪೇಶ್ವರ ಮಠದ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಮನೋಭಾವ ಉಳ್ಳವರು ಸಂಘಟನೆ ಯಶಸ್ವಿಯಾಗಿ ಮುನ್ನಡೆಸುತ್ತಾರೆ. ವೀರಶೈವ ಸಮಾಜ ಗಟ್ಟಿಯಾದ ಶಕ್ತಿಯಾಗಿ ಹೊರಹೊಮ್ಮಬೇಕು. ಸರ್ಕಾರಿ ಸವಲತ್ತು ಪಡೆಯುವಲ್ಲಿ ವೀರಶೈವ ಸಮಾಜ ವಿಫಲವಾಗಿದೆ. ಸಮಾಜವು ವಿಶ್ವವೇ ಒಂದು ಎನ್ನುವ ತತ್ವವನ್ನು ಹೊಂದಿದ್ದು, ತಾಯಿಯ ಗರ್ಭಧಾರಣೆ ಆಗಿ 8 ತಿಂಗಳಲ್ಲಿಯೇ ಮಗುವಿಗೆ ಲಿಂಗಾದಾರಣೆ ಮಡುವುದು ನಮ್ಮ ಸಮಾಜದ ವಿಶೇಷ, ಆದರೆ ಇಂದು ಲಿಂಗಾಧಾರಣೆ ಮಾಡಿಕೊಳ್ಳಲು ಸಂಕುಚಿತ ಮನೋಭಾವ ತೋರಿಸುತ್ತಿರುವುದು ಸರಿಯಾದ ನಡೆಯಲ್ಲ ಎಂದರು.
ವೀರಶೈವ ಸಮಾಜದ ತಾಲೂಕಾಧ್ಯಕ್ಷ ಎಂ.ರಾಜಶೇಖರ ಮಾತನಾಡಿ, ವೀರಶೈವ ಮಹಾಸಭಾ ಕೇವಲ ಸಂಘಟನೆಯಲ್ಲ, ಅದೊಂದು ಶಕ್ತಿಯಾಗಿದೆ. ವೀರಶೈವ ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಟಿ.ಎಂ. ಚಂದ್ರಶೇಖರಯ್ಯ, ಹುಳ್ಳಿ ಕೊಟ್ರೇಶಪ್ಪ, ಕೆ.ಎಂ. ಕೊಟ್ರಯ್ಯ, ಸಂಘದ ಸದಸ್ಯರಾದ ಎಲ್.ಕೊಟ್ರೇಶಪ್ಪ, ಸಿ.ಎಂ. ಕೊಟ್ರಯ್ಯ, ಎಚ್.ಎಂ. ಜಗದೀಶ, ಶಿವಾನಂದಪ್ಪ, ದೊಡ್ಡ ಬಸವರಾಜ, ಶಿವಕುಮಾರಸ್ವಾಮಿ, ಪಿ.ಬಿ. ಗೌಡ, ಬಸಯ್ಯ ವಕೀಲ, ಮಲ್ಲಿಕಾರ್ಜುನ ಸ್ವಾಮಿ, ಅನುರಾಧ, ನಂದಿನಿ, ಪ್ರಬಾ ಅಜ್ಜಣ್ಣ, ವೀಣಾ, ಸುಮ, ಅಕ್ಷಯ್ ಕುಮಾರ ಇತರರಿದ್ದರು.