ಬೆಂಗಳೂರು:-ನಗರದ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಕೊರಿಯರ್ ಬಾಯ್ ಗೆ ಚಾಕು ಇರಿದಿರುವ ಘಟನೆ ಜರುಗಿದೆ.
Advertisement
ಕೊರಿಯರ್ ಮಾಡಲು ಮನೆ ಬಳಿ ಬಾರದಿದ್ದಕ್ಕೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಕಳಿಸಿದ ಲೊಕೇಷನ್ ಗೆ ಬಾರದೇ, ಲ್ಯಾಂಡ್ ಮಾರ್ಕ್ ಕೇಳಿದ್ದಕ್ಕೆ ಚಾಕು ಇರಿದಿದ್ದಾರೆ.
ಗಾಯಾಳು ಕೊರಿಯರ್ ಬಾಯ್ ನನ್ನು ಮಹಮ್ಮದ್ ಶಫಿ ಎಂದು ಗುರುತಿಸಲಾಗಿದೆ. ಗಾಯಾಳುಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೂಡಲೇ ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿದ್ದಾರೆ.