ದಾವಣಗೆರೆ: ಸಾಲಭಾದೆ ತಾಳಲಾರದೆ ರೈತ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ನಡೆದಿದೆ. ಧನು ಕೆ (27) ಮೃತ ಯುವ ರೈತ. ರೈತ ಧನು ತನ್ನ ಒಂದು ಎಕರೆ ಜಮೀನಿನ ಜೊತೆಗೆ ನಾಲ್ಕು ಎಕರೆ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರು.
Advertisement
ಸರಿಯಾದ ಬೆಳೆ ಬಾರದೆ ಮತ್ತು ಬಂದ ಬೆಳೆಗೆ ಬೆಲೆ ಸಿಗದೆ ರೈತ ಧನು ಎರಡು ವರ್ಷಗಳಿಂದ ನಷ್ಟ ಅನುಭವಿಸಿದ್ದನು. ಖಾಸಗಿ ಚೀಟಿಗಳು, ಕೈಗಡ ಸಾಲ ಸೇರಿ ರೈತ ಧನು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದನು. ಸಾಲ ತೀರಿಸುವ ಚಿಂತೆಯಲ್ಲಿ ಮನನೊಂದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.