ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಇನ್ನೇನೂ ಎರಡು ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದಾರೆ. ಹೀಗಾಗಿ 6 ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಇದೀಗ ಸಂಕ್ರಾಂತಿ ಹಬ್ಬ ಆಚರಣೆಗೆ ದೊಡ್ಮೆನೆಗೆ ತಾರಾ ಅವರು ಆಗಮಿಸಿದ್ದಾರೆ. ಆ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ.
ಸ್ಪರ್ಧಿಗಳ ನಡುವೆ ನಡೆದು ಹೋದ ಸಿಹಿ-ಕಹಿ ಘಟನೆಗಳನ್ನು ಮೆಲಕು ಹಾಕಿಸಿದ್ದಾರೆ. ಜೊತೆಗೆ ಕಹಿ ಘಟನೆಗಳನ್ನು ಮರೆತು ಸಿಹಿ ವಿಷಯಗಳೊಂದಿಗೆ ಹೆಜ್ಜೆ ಹಾಕಲು ತಾರಮ್ಮ ಸ್ಫೂರ್ತಿ ನೀಡಿದ್ದಾರೆ. ಈ ವೇಳೆ ಮೋಕ್ಷಿತಾ ಮತ್ತು ಮಂಜು ಭಾವನಾತ್ಮಕ ಘಳಿಗೆಗೆ ಸಾಕ್ಷಿಯಾದರು.
ಮನೆಯಲ್ಲಿ ಅತಿಹೆಚ್ಚು ಜಗಳ ಆಡಿರೋದು ಮಂಜಣ್ಣ ಜೊತೆಗೆ ಎಂದು ಮೋಕ್ಷಿತಾ, ತಾರಮ್ಮ ಜೊತೆ ನೋವುಗಳನ್ನು ಹಂಚಿಕೊಂಡರು. ಅದಕ್ಕೆ ಮಂಜು ಪ್ರತಿಕ್ರಿಯಿಸಿ, ಅವರು ನನ್ನನ್ನು ಅಣ್ಣ ಎಂದು ಕರೆಯುತ್ತಾರೆ. ತಂಗಿಗೆ ಇರುವ ಮೆಚುರಿಟಿ ನನಗೆ ಇಲ್ವಲ್ಲ. ಒಂದು ಕಡೆ ದುಡುಕಿ, ಸಿಕ್ಕಾಪಟ್ಟೆ ನೋವು ಕೊಟ್ಟೆ. ನಾನು ಕ್ಷಮೆ ಕೇಳುತ್ತೇನೆ ಎಂದು ತಬ್ಬಿಕೊಂಡಿದ್ದಾರೆ.