ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಭಾಗ್ಯನಗರದ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದಲ್ಲಿ ಲಕ್ಷಾಂತರ ರೂಪಾಯಿ ಲಪಟಾಯಿಸಿ , ಕಳೆದ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಪ್ಪಳ ಪೋಲಿಸರು ಬಂದಿಸಿದ್ದಾರೆ.
2003ರಲ್ಲಿ ಭಾಗ್ಯನಗರದ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ ಸಬ್ ಸೆಂಟರ್ನಲ್ಲಿ ಜ್ಯೂನಿಯರ್ ಅಸಿಸ್ಟಂಟ ಕೆಲಸ ಮಾಡುತ್ತಿದ್ದ ಹಾಸನ ಮೂಲದ ಜಿ.ಮಂಜುನಾಥ 2002 ರಿಂದ ಜುಲೈ 2003 ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಒಟ್ಟು 16 , ಬೇಲ್ಸ್ಗಳು ಅಂದಾಜು 2,12,100 ಬೆಲೆಯ ವಸ್ತುಗಳನ್ನು ನಂಬಿಕೆ ದ್ರೋಹ ಮಾಡಿ ವಂಚನೆ ಮಾಡಿದ್ದರ ಕುರಿತು ಕೆ.ಎಕ್ಸ್ , ಥಾಮಸ್ , ಯೋಜನಾ ಆಡಳಿತಾಧಿಕಾರಿ 30-07-2005 ರಂದು ದೂರು ನೀಡಿದ್ದರು.
ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ 2005ರಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಮಾಡಿ 2010ರಲ್ಲಿ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆದರೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. 2011ರಲ್ಲಿ ಪ್ರಕರಣವನ್ನು ಎಲ್ ಪಿಸಿಎಂದು ಘೋಷಣೆ ಮಾಡಲಾಗಿತ್ತು.
ಇತ್ತೀಚಿಗೆ ನಗರದ ಸಿಪಿಐ ಮಾರುತಿ ಗುಳ್ಳಾರಿಯವರ ನೇತೃತ್ವದ ನಾಗಪ್ಪ ಪಿ.ಎಸ್.ಐ ( ಕಾ & ಸು ) ., ಸೂರ್ಯಕಾಂತಪ್ಪ ಸಿಹೆಚಸಿ . ರಾಜಶೇಖರ ಹೆಚಸಿ ತಂಡ ಆರೋಪಿಯ ಜಾಡನ್ನು ಹಿಡಿದು ಬೆಂಗಳೂರಿಗೆ ತೆರಳಿತ್ತು. ಕೊನೆಗೂ ಜಯನಗರದಲ್ಲಿ ಇದ್ದ ಆರೋಪಿತನನ್ನು ಬಂದಿಸಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಗಕ್ಕೆ ಎಸ್ಪಿ ಟಿ.ಶ್ರಿ ಧರ ಅಭಿನಂದನೆ ಸಲ್ಲಿಸಿದ್ದಾರೆ.
Trending Now



