ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಕದಾಂಪೂರ ರಸ್ತೆಯಲ್ಲಿರುವ ಹಜರತ್ ಜಿಂದಾಶ್ಯಾವಲಿ ಅವರ 57ನೇ ಉರುಸ್ ಉತ್ಸವ ಮಾರ್ಚ್ 16ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮುಸ್ಲಿಮ್ ಜಮಾತ್ (ಆಡಳಿತ) ಅಂಜುಮನ್ ಏ ಇಸ್ಲಾಮ್ ಕಮಿಟಿಯ ಆಶ್ರಯದಲ್ಲಿ ಜರುಗಲಿದೆ.
ಅಂದು ಗದ್ದುಗೆಯ ಮೇಲೆ ಪುಷ್ಪಗುಚ್ಛ ಏರಿಸುವ ಮೂಲಕ ಗದ್ದುಗೆಯ ಮುಂದೆ ಪ್ರಾರ್ಥನೆ ಕಾರ್ಯಕ್ರಮ ನೆರವೇರುವುದು. ರಾತ್ರಿ 9ಕ್ಕೆ ಜ್ಯೋತಿ ಬೆಳಗಿಸುವ ಕಾರ್ಯಕ್ರಮ, ಕಲಕತ್ತಾದ ಜಹಾಂಗೀರ ಅಲಮ್ ನೂರಿ ಅವರಿಂದ ಬಯಾನ ಕಾರ್ಯಕ್ರಮದಂಗವಾಗಿ ರಿವಾಯತ್ ಕವಾಲಿ, ಜಾನಪದ ಸಂಗೀತ ಕಾರ್ಯಕ್ರಮಗಳು ಜರುಗುವವು.
ನಂತರ ಗುರು ಕುಮಾರೇಶ್ವರ ನಾಟ್ಯ ಸಂಘ ನವಲಗುಂದ ಇವರಿಂದ ಸಂತ ಶಿಶುನಾಳ ಶರೀಫಸಾಬ ನಾಟಕ ಪ್ರದರ್ಶನಗೊಳ್ಳಲಿದೆ. ಇದಕ್ಕೂ ಪೂರ್ವ ಸಂದಲ್ (ಗಂಧ) ಉತ್ಸವವು ರಮಜಾನ ಶಾವಲಿಯವರ ಗದ್ದುಗೆಯಿಂದ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆದು ಜಂದಿಪೀರ ದರ್ಗಾದಲ್ಲಿ ಮುಕ್ತಾಯವಾಗಲಿದೆ. ಗುಡಗೇರಿಯ ತಾಜ್ ಮ್ಯೂಜಿಕಲ್ ಬ್ರಾಸ್ಬ್ಯಾಂಡ್ ಕಂಪನಿಯ ಕಲಾವಿದರು ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳ ಮೂಲಕ ಮನ ರಂಜಿಸಲಿದ್ದಾರೆ. ಮಾ.17ರಂದು ಚಿರಶಾಂತಿ ಪ್ರಾರ್ಥನೆ, ಮಾ.27ರಂದು ಝೆಂಡಾ ಇಳಿಸುವುದು ಹಾಗೂ ಲೆಕ್ಕಪತ್ರ ಪರಿಶೀಲನಾ ಸಭೆ ನಡೆಯುವುದು ಎಂದು ಮುಸ್ಲಿಮ್ ಜಮಾತ್ (ಆಡಳಿತ) ಅಂಜುಮನ್ ಏ ಇಸ್ಲಾಮ್ ಕಮಿಟಿಯ ಪ್ರಕಟಣೆ ತಿಳಿಸಿದೆ.