ಜನರ ನೋವಿಗೆ ಸ್ಪಂದಿಸಿ: ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ನೌಕರರ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎನ್‌ಪಿಎಸ್ ರದ್ದತಿ ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಶೀಘ್ರ ಜಾರಿಗಾಗಿ ಕೈಗೊಂಡಿರುವ ಸರಕಾರ ಕ್ರಮಗಳ ಕುರಿತು ವಿಶೇಷ ಆದ್ಯತೆ ನೀಡಿ ಕೆಲಸ ಮಾಡುವುದಾಗಿ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.

Advertisement

ಅವರು ಇತ್ತೀಚೆಗೆ ಪಟ್ಟಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಐತಿಹಾಸಿಕ ಶ್ರೀ ಸೋಮೇಶ್ವರನ ದರ್ಶನ ಪಡೆದು, ಗೌರವ ಸ್ವೀಕರಿಸಿ ನಂತರ ನಡೆದ ಸಭೆಯಲ್ಲಿ ನೌಕರರ ವತಿಯಿಂದ ನಡೆದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಹೊಸ ಪಿಂಚಣಿ ಯೋಜನೆ ಬದಲಿಗೆ ಹಳೆಯ ಪಿಂಚಣಿ ಯೋಜನೆ ಜಾರಿ ಹಾಗೂ ಕೇಂದ್ರ ವೇತನವನ್ನು ರಾಜ್ಯ ಸರ್ಕಾರಿ ಜಾರಿಗೊಳಿಸುವಂತೆ ಸರಕಾರಕ್ಕೆ ಆಗ್ರಹಿಸುತ್ತೇನೆ. ಎಲ್ಲ ಇಲಾಖೆಗಳ ನೌಕರರು ತಮ್ಮ ತಮ್ಮ ಹುದ್ದೆಯಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಸುವದರ ಜೊತೆಗೆ ಜನರ ನೋವಿಗೆ ಸ್ಪಂದಿಸುವ ಕಾರ್ಯ ಮಾಡಿ ಎಂದು ಸಲಹೆ ನೀಡಿದರು.

ನೌಕರರ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಉಪಾಧ್ಯಕ್ಷ ಸದಾನಂದ ನೆೆಲ್ಕುದ್ರಿ, ಜಿಲ್ಲಾಧ್ಯಕ್ಷರುಗಳಾದ ವೀರೇಶ ವಡೆಯನಪುರ, ಶಿವಾನಂದ, ಅರುಣ್, ಹುಡೇದಗೌಡ್ರು, ಲಕ್ಷ್ಮೇಶ್ವರ ತಾಲೂಕು ಘಟಕದ ಅಧ್ಯಕ್ಷ ಗುರುರಾಜ್ ಹವಳದ, ನಾಗರಾಜ್ ಹಳ್ಳಿಕೇರಿ, ಪೂರ್ಣಾಜಿ ಖರಾಟೆ, ಎಂ.ಎ. ನದಾಫ್ ಬಿ.ಎಸ್. ಹರ್ಲಾಪುರ, ಚಂದ್ರು ನೇಕಾರ, ಡಿ.ಎಚ್. ಪಾಟೀಲ್, ಜಿ.ಎಸ್. ಗುಡಗೇರಿ, ಎಂ.ಎಸ್. ಹಿರೇಮಠ, ಎಸ್.ಬಿ. ಅಣ್ಣಿಗೇರಿ, ನೌಕರರ ಸಂಘದ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here