ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ 15 ಕೋಟಿಗೂ ಅಧಿಕ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ಪಟ್ಟಣದ ಬಾಲಕಿಯರ ಪ್ರೌಢಶಾಲೆ ಕೊಠಡಿ, ಉಪ್ಪಾರಗೇರಿ, ಕುರುಬಗೇರಿ ಶಾಲಾ ಕೊಠಡಿ ನಿರ್ಮಾಣ, ಕಂಚಿಕೆರೆ, ಅಡವಿಮಲ್ಲಾಪುರ, ಆಲದಹಳ್ಳಿ ಗ್ರಾಮಗಳ ಎಸ್ಟಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದರು.
ನಂತರ ಕುಮಾರನಹಳ್ಳಿ, ಅಡವಿಹಳ್ಳಿ, ಮೈದೂರು, ಹಗರಿ ಗಜಾಪುರ, ಕನ್ನಕಟ್ಟಿ, ಕುಣೇಮಾದಿಹಳ್ಳಿ, ಬಳಿಗನುರು, ಕೆಸರಳ್ಳಿ, ಬಸವನಾಳು, ಗೌರಿಪುರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಬಳಿಕ ಕೆ.ಕಲ್ಲಹಳ್ಳಿ, ಸತ್ತೂರು, ಯಡಿಹಳ್ಳಿ, ಗ್ರಾಮಗಳ ಸರ್ಕಾರಿ ಶಾಲೆಗಳ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರಗೌಡ, ಮೈದೂರು ರಾಮಣ್ಣ, ಮುತ್ತಿಗಿ ಜಂಬಣ್ಣ, ಉದಯ ಕುಮಾರ್, ಯೋಗೇಶಗೌಡ, ಎಇಇ ಕುಬೇಂದ್ರ ನಾಯ್ಕ, ಮತ್ತೂರು ಬಸವರಾಜ ಹಾಗೂ ಇತರರಿದ್ದರು.