ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕಪ್ಪತ್ತಗಿರಿ ಫೌಂಡೇಶನ್ ಶಿಕ್ಷಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆಯ ವತಿಯಿಂದ ಪರಿಸರೋತ್ಸವ ಕಾರ್ಯಕ್ರಮ ಜೂನ್ 29ರಂದು ನಡೆಯಲಿದೆ. ರಾಜ್ಯ ಮಟ್ಟದ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಗದಗ ಜಿಲ್ಲೆಯ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಪ್ಪತ್ತಗಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಎಂ. ಇಟಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕಳಸಾಪೂರ ಗ್ರಾಮದ ಗಣ್ಯರಾದ ಶರದ್ರಾವ್ ಚ.ಹುಯಿಲಗೋಳ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಚಂದ್ರಕಲಾ ಎಂ.ಇಟಗಿಮಠ ವಹಿಸಿಕೊಳ್ಳಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಡಾ. ನಿಂಗೂ ಸೋಲಗಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಹರಿನಾಥ್ ಬಾಬು, ಈಶ್ವರ ಕುರಿ ಪಾಲ್ಗೊಳ್ಳುವರು. ಪ್ರಾಸ್ತಾವಿಕವಾಗಿ ಮಹಾಂತೇಶ ಬೇರಗಣ್ಣವರ ಮಾತನಾಡುವರು. ಉಪನ್ಯಾಸಕರಾಗಿ ಎಂ.ಆರ್. ನಲವಡಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಐ.ಕೆ. ಕಮ್ಮಾರ, ಶೋಭಾ ಮೇಟಿ, ಬಿ.ಬಿ. ಗೌಡರ, ರಾಮಪ್ಪ ಪೂಜಾರ, ರವಿಕಾಂತ ಅಂಗಡಿ, ಮಲ್ಲಿಕಾರ್ಜುನ ಖಂಡಮ್ಮನವರ, ಬಸವರಾಜ ಕುರ್ತಕೋಟಿ, ಚಿದಾನಂದ ಗೆಜ್ಜೆಸ್ವಾಮಿಮಠ, ಗೀತಾ ಮಹಾಂತೇಶ ಸಜ್ಜನರ, ಸಂಗಮೇಶ ಬಸಪ್ಪ ನೀರಲಿಗಿ, ಗೋಪಾಲ ಲಮಾಣಿ ಆಗಮಿಸಲಿದ್ದಾರೆ.
ಎಂ.ಕೆ. ಲಮಾಣಿ, ಎ.ಮಹಮ್ಮದ್ ರಫಿ, ಡಾ. ಪ್ರವೀಣ ಕರಿಯಪ್ಪನವರ, ಮಹಾಂತೇಶ ಶಂಕ್ರಪ್ಪ ಗುಜಮಾಗಡಿ, ಕೀರ್ತಿ ಶೇಖಪ್ಪ ನಾಯ್ಕರ್, ಸ್ವಪ್ನಾ ಪ.ಹಿರೇಮಠ ಗೌರವ ಸನ್ಮಾನವನ್ನು ಸ್ವೀಕರಿಸಲಿದ್ದಾರೆ. ಕವಿಗೋಷ್ಠಿಯಲ್ಲಿ ರಾಜ್ಯದ 35 ಲೇಖಕ-ಲೇಖಕಿಯರು ತಮ್ಮ ಸ್ವರಚಿತ ಕವನವನ್ನು ವಾಚಿಸಲಿದ್ದಾರೆ. ಜ್ಯೋತಿ ಗೆಜ್ಜೆಸ್ವಾಮಿಮಠ ಪ್ರಾರ್ಥಿಸುವರು. ಶಿವಲೀಲಾ ಎಸ್.ಧನ್ನಾ ಸ್ವಾಗತಿಸಿದರೆ, ಮಂಜುನಾಥ್ ಹೂಗಾರ ಹಾಗೂ ಮಂಜುಳಾ ರಾಯನಗೌಡ್ರ ಕಾರ್ಯಕ್ರಮ ನಿರೂಪಿಸುವರು. ಮಮತಾ ದೊಡ್ಡಮನಿ ವಂದನಾರ್ಪಣೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.