ಅಂಬರೀಶ್ ಬಗ್ಗೆ ಮಾತನಾಡಿದರೆ ಹುಷಾರ್!

0
Spread the love

ವಿಜಯಸಾಕ್ಷಿ ಸುದ್ದಿ, ಮೈಸೂರು

Advertisement

ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ ಮಾಜಿ ಸಿಎಂ ಎಚ್ಡಿಕೆಗೆ ಅಂಬರೀಶ್ ಅಭಿಮಾನಿ ಎಚ್ಚರಿಕೆ

ಕಳೆದ ಒಂದು ವಾರದಿಂದ ಅಕ್ರಮ ಗಣಿಗಾರಿಕೆ ಕುರಿತಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ ಮತ್ತು ದಳ ನಾಯಕರ ನಡುವೆ ಟಾಕ್ ವಾರ್ ನಡೆದಿರುವ ಮಧ್ಯೆಯೇ ಬನ್ನೂರಿನಲ್ಲಿ ಅಂಬರೀಶ್ ಅಭಿಮಾನಿಗಳು ಸುದ್ದಿಗೋಷ್ಠಿ ನಡೆಸಿ ಎಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬನ್ನೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅಂಬರೀಶ್ ಅಭಿಮಾನಿಗಳು,
ಅಂಬಿರೀಶ್ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಕೂಡಲೆ ನಿಲ್ಲಿಸುವಂತೆ ಮನವಿ ಮಾಡಿದ್ದು, ಇಲ್ಲವಾದಲ್ಲಿ ರಾಜ್ಯದಾದ್ಯಂತ ಅಂಬಿ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

ಅಂಬಿ ಅಭಿಮಾನಿಗಳು ಜೇನು ಗೂಡಿನಂತೆ. ಜೇನಿಗೆ ಆಸೆ ಪಟ್ಟು ಕಲ್ಲೆಸೆದರೆ ಜೇನಿನ ದಾಳಿಗೆ ಸಿದ್ದರಾಗಿ ಎಂದು ಕುಮಾರಸ್ವಾಮಿ ಅವರಿಗೆ ಅಂಬರೀಶ್ ಅಭಿಮಾನಿ ಸಂಘದ ಅಧ್ಯಕ್ಷ ನಂದೀಶ್ ಎಚ್ಚರಿಕೆ ನೀಡಿದ್ದಾರೆ.

ನಿರ್ಮಲಾನಂದ ಶ್ರೀಗಳ ಮಧ್ಯ ಪ್ರವೇಶಕ್ಕೆ ಒತ್ತಾಯ

ಮತ್ತೊಂದೆಡೆ ಬನ್ನೂರಿನಲ್ಲಿ ಜೆಡಿಎಸ್ ರೈತದಳ ಅಧ್ಯಕ್ಷ ಗಿರೀಶ್ ಸಾತ್ವಿಕ ಮಾತನಾಡಿ, ರಾಜಕೀಯಕ್ಕಾಗಿ ಅಂಬರೀಶ್ ಹೆಸರಿಗೆ ಕಳಂಕ ತರಬೇಡಿ . ಈಗಾಗಲೇ ನಿಮ್ಮ ನಡೆಯಿಂದ ಪಕ್ಷಕ್ಕೆ ನಷ್ಟ ಉಂಟಾಗಿದೆ.
ಹೀಗೆಯೇ ಮುಂದುವರಿದರೆ ನಿಮ್ಮದೇ ಪಕ್ಷದಲ್ಲಿರುವ ಅಂಬರೀಶ್ ಅಭಿಮಾನಿಗಳ ಬಂಡಾಯಕ್ಕೆ ಕಾರಣವಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here