ಕಾಂಗ್ರೆಸ್ ಕಾರ್ಯಕರ್ತ ಶೇಖಪ್ಪ ಕೆಂಗಾರ ಅದರಿಂದ ದೀಡ ನಮಸ್ಕಾರ….
ವಿಜಯಸಾಕ್ಷಿ ಸುದ್ದಿ, ನರೇಗಲ್ಲ
ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ರೋಣ ಮತಕ್ಷೇತ್ರದ ಅಭ್ಯರ್ಥಿ ಜಿ.ಎಸ್. ಪಾಟೀಲ ಗೆಲುವಿಗಾಗಿ ಪಟ್ಟಣದ ಕಾರ್ಯಕರ್ತ ಶೇಖಪ್ಪ ಕೆಂಗಾರ ದೀಡ ನಮಸ್ಕಾರ ಹಾಕುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಮಂಗಳವಾರ ಕೋಡಿಕೊಪ್ಪದ ಮಲ್ಲಯ್ಯಜ್ಜನವರ ಗದ್ದುಗೆಯಿಂದ ಹಠಯೋಗಿ ವೀರಪ್ಪಜ್ಜನ ಮಠದವರೆಗೆ ಸುಮಾರು ಒಂದು ಕಿ.ಮೀ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ದೀಡ ನಮಸ್ಕಾರ ಹಾಕಿದರು.
ಕಾಂಗ್ರೆಸ್ ಮುಖಂಡ ಎಂ.ಎಸ್. ಧಡೇಸೂರಮಠ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಸ್. ಪಾಟೀಲ ಗೆಲ್ಲುವುದು ಖಚಿತ. ಈಗಾಗಲೇ ಕ್ಷೇತ್ರದ ಮತದಾರರು ಜಿ.ಎಸ್. ಪಾಟೀಲ ಅವರ ಪರ ಸ್ವಯಂ ಪ್ರಚಾರ ನಡೆಸುತ್ತಿದ್ದು, ಭಾರಿ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ.
ಜಿ.ಎಸ್. ಪಾಟೀಲ ಅವರ ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳು ಅವರ ಗೆಲುವಿಗೆ ಪ್ರಮುಖ ಕಾರಣವಾಗಲಿವೆ. ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುವ ಅವರ ಗುಣ, ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತಚಾಚುವ ಪ್ರವೃತ್ತಿ, ಕಿರಿಯರು, ಹಿರಿಯರು ಎನ್ನದೇ ಎಲ್ಲರನ್ನೂ ಆತ್ಮೀಯವಾಗಿ ನೋಡುವ ಮನಸ್ಥಿತಿ ಅವರದ್ದಾಗಿದೆ. ಆದ್ದರಿಂದಲೇ, ಜಿ.ಎಸ್. ಪಾಟೀಲರ ಬಗ್ಗೆ ಕ್ಷೇತ್ರದ ಜನೆತೆಗೆ ವಿಶೇಷವಾದ ವಿಶ್ವಾಸವಿದೆ. ಮುಂಬರುವ ಚುಣಾವಣೆಯಲ್ಲಿ ಜಿ.ಎಸ್. ಪಾಟೀಲ ಅವರು ಗೆಲ್ಲುವುದು ಸೂರ್ಯ, ಚಂದ್ರರಿರುವಷ್ಟೆ ಸತ್ಯ ಎಂದರು.
ಮಾಜಿ ಶಾಸಕ ಜಿ.ಎಸ್. ಪಾಟೀಲ, ನರೇಗಲ್ಲ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ, ನರೇಗಲ್ಲ ಬ್ಲಾಕ್ ಅಧ್ಯಕ್ಷ ಶರಣಪ್ಪ ಬೆಟಗೇರಿ, ಎ.ಆರ್. ಮಲ್ಲಗೌಡ್ರ, ಅಲ್ಲಾಭಕ್ಷಿ ನದಾಫ್, ಬಾಳಪ್ಪ ಸೋಮಗೊಂಡ, ನಿಂಗನಗೌಡ ಲಕ್ಕನಗೌಡ್ರ, ಗುಡದಪ್ಪ ಗೋಡಿ, ಬಿ.ಎಸ್. ಕೊತಬಾಳ, ಬಸವರಾಜ ಅಬ್ಬಿಗೇರಿ, ರಾಚಯ್ಯ ಮಾಲಗಿತ್ತಿಮಠ, ಹನಮಂತ ದ್ವಾಸಲ, ಶರಣಪ್ಪ ಸೋಮಗೊಂಡ, ಶೇಖಪ್ಪ ಜುಟ್ಲ, ಶರಣಪ್ಪ ಕುರಿ, ಹಟೇಲಸಾಬ ಲತೀಫಸಾಬನವರ ಸೇರಿದಂತೆ ಇತರರಿದ್ದರು.