ವಿಜಯಸಾಕ್ಷಿ ಸುದ್ದಿ, ಗದಗ
ತಹಶೀಲ್ದಾರ ಎದುರು ಸುಳ್ಳು ಮಾಹಿತಿ ನೀಡಿ, ಅರ್ಹತೆ ಇಲ್ಲದಿದ್ದರೂ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದು ಸರಕಾರದ ಆರೋಗ್ಯ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿ ಹುದ್ದೆಯ ಕೆಲಸ ಪಡೆದುಕೊಂಡ ಮಹಿಳೆ ಹಾಗೂ ಅಂದಿನ ತಹಶೀಲ್ದಾರ, ಕಂದಾಯ ನಿರೀಕ್ಷಕ ಹಾಗೂ ತಲಾಠಿ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ಇಂಜಿನಿಯರ್ ಮನೆಯ ಬೀಗ ಮುರಿದು 9.42 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ
ಪ್ರಕರಣದ ಆರೋಪಿ ಮುಂಡರಗಿ ತಾಲೂಕಿನ ಬಿದರಳ್ಳಿಯ ರೇಣುಕಾ ಸತ್ಯಪ್ಪ ಕುರಗೋಡಿ ಎಂಬುವವರು ಮಡ್ಡರ ಜಾತಿಗೆ ಸೇರಿದ್ದರೂ ಕೂಡ ದಿ. 14.01.2015ರಂದು ಮುಂಡರಗಿಯ ತಹಶೀಲ್ದಾರ ಎದುರು ಸುಳ್ಳು ಮಾಹಿತಿ ಹಾಗೂ ಸುಳ್ಳು ಘೋಷಣೆಗಳನ್ನು ಮಾಡಿ, ಅವರಿಂದ ಹಿಂದೂ ಭೋವಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದು ಅದರ ಆಧಾರದ ಮೇಲೆ ಕಿರಿಯ ಆರೋಗ್ಯ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿ, ನೇಮಕಾತಿ ಪಡೆದು ದಿ. 31.01.2015 ರಂದು ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸಕ್ಕೆ ಹಾಜರಾಗಿದ್ದರು.
ಇದನ್ನೂ ಓದಿ ಶಿಕ್ಷಕಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು: ನಗರಸಭೆ ಬಿಜೆಪಿ ಸದಸ್ಯೆ ಸೇರಿ ನಾಲ್ವರ ಬಂಧನ
ಈ ಮೂಲಕ ಸರ್ಕಾರಕ್ಕೆ ಮತ್ತು ನಿಜವಾದ ಪರಿಶಿಷ್ಟ ಜಾತಿಯ ಜನರಿಗೆ ಮೋಸ ಮಾಡಿ ಅಪರಾಧವೆಸಗಿರುವ ಬಗ್ಗೆ ರೇಣುಕಾ, ಸದರಿ ಜಾತಿ ಪ್ರಮಾಣಪತ್ರ ವಿತರಿಸಿದ ಅಂದಿನ ತಹಶೀಲ್ದಾರ, ಅಂದು ಕರ್ತವ್ಯದಲ್ಲಿದ್ದ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ
ಕಲಂ: 177,182,198,199,420,109
ಐಪಿಸಿ ಮತ್ತು U/S 3[1][q] sc/st[PA] amendment act-2015 ಮತ್ತು ಕಲಂ: 5(ಎ), 5(ಬಿ), 6(ಎ) ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಅಧಿನಿಯಮ 2011ರ ಅನ್ವಯ ಮೊಕದ್ದಮೆ ದಾಖಲಿಸುವಂತೆ ಎಸ್ಸಿ, ಎಸ್ಟಿ ರಕ್ಷಣಾ ಕೋಶದ
Directorate of civil rights enforcement ನ ಬಾಗಲಕೋಟೆಯ ಪೊಲೀಸ್ ಅಧಿಕಾರಿಗಳಾದ ವೆಂಕಟೇಶ ಎಸ್ ಮುರ್ನಾಳ ಎಂಬುವರು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.