ತೋಟದಲ್ಲಿದ್ದ ತುಂತುರು ನೀರಾವರಿ ಮತ್ತು ವಿದ್ಯುತ್ ಉಪಕರಣಗಳು, 2500 ಸಾವಿರ ಬಾಳೆ ಸೇರಿ ಇತರೇ ಗಿಡಮರಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ತಾಲೂಕಿನ ಬಾಲೆಹೊಸೂರ ಗ್ರಾಮದ ರೈತ ದತ್ತಾತ್ರೆಯ ಕಟ್ಟಿಮನಿ ಎಂಬುವರಿಗೆ ಸೇರಿದ ಬಾಳೆತೋಟಕ್ಕೆ ಆಕಸ್ಮಿಕ ಬೆಂಕಿ ಹೊತ್ತಿ ಎರಡೂವರೆ ಎಕರೆ ಬಾಳೆ ತೋಟ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಘಟನೆ ಶುಕ್ರವಾರ ಸಂಭವಿಸಿದೆ.
ಬಾಳೆತೋಟದ ಪಕ್ಕದ ಜಮೀನಿನಲ್ಲಿನ ಹುಲ್ಲುಗಾವಲಿಗೆ ಯಾರೂ ಹೊತ್ತಿಸಿದ ಬೆಂಕಿ ಗಾಳಿಯ ರಭಸಕ್ಕೆ ಬಾಳೆತೋಟಕ್ಕೆ ಆವರಿಸಿ ಬಾಳೆತೋಟ ಸಂಪೂರ್ಣ ಹಾಳಾಗಿದೆ. ತೋಟದಲ್ಲಿದ್ದ ತುಂತುರು ನೀರಾವರಿ ಮತ್ತು ವಿದ್ಯುತ್ ಉಪಕರಣಗಳು, 2500 ಸಾವಿರ ಬಾಳೆ ಸೇರಿ ಇತರೇ ಗಿಡಮರಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.
ಸುದ್ದಿ ತಿಳಿದು 25ಕಿ.ಮೀ ದೂರದ ಲಕ್ಷ್ಮೇಶ್ವರದಿಂದ ಅಗ್ನಿಶಾಮಕ ವಾಹನ ಬರುವಷ್ಟರಲ್ಲಾಗಲೇ ಅಂದಾಜು ಐದಾರು ಲಕ್ಷ ರೂ ಮೌಲ್ಯದ ಬೆಳೆಹಾನಿಗೀಡಾಗಿದೆ. ಸೇರಿದ್ದ ರೈತರು ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಟಿ ನೀಡಿ ಹಾನಿಯ ಅಂದಾಜು ಪರಿಶೀಲಿಸಿದ್ದಾರೆ.