HomeGadag Newsಪುಲ್ ಕುಡಿ ಮೆಲ್ಲಕ ನಡಿ ರಚ್ಚು, ಊರಿಗೆ ಕಾಲಿಟ್ಟ ಉಡಾಳ ಭದ್ರಗೆ ರಾಜ್ಯ ಮಟ್ಟದ ಬಹುಮಾನ

ಪುಲ್ ಕುಡಿ ಮೆಲ್ಲಕ ನಡಿ ರಚ್ಚು, ಊರಿಗೆ ಕಾಲಿಟ್ಟ ಉಡಾಳ ಭದ್ರಗೆ ರಾಜ್ಯ ಮಟ್ಟದ ಬಹುಮಾನ

Spread the love

ದುರ್ಗಾದೇವಿ ಯುವಕ ಮಂಡಳದಿಂದ ರಾಜ್ಯ ಮಟ್ಟದ ಟಗರಿನ ಕಾಳಗ ಸ್ಪರ್ಧೆ

ನರಗುಂದ: ತಾಲೂಕಿನ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾ ದೇವಿ ಯುವಕ ಮಂಡಳದ ವತಿಯಿಂದ ರಾಜ್ಯ ಮಟ್ಟದ ಟಗರಿನ ಕಾಳಗ ಸ್ಪರ್ಧೆ ಏರ್ಪಡಿಸಲಾಗಿತ್ತು.

ಹಾಲು ಹಲ್ಲಿನ ಟಗರಿನ ಕಾಳಗ, ಪ್ರಥಮ ಬಹುಮಾನ : ಕೆಂಚಮ್ಮ ದೇವಿ ಬಲ್ಲ ಸಾ|| ಮಮಟಗೇರಿ, ದ್ವಿತೀಯ ಬಹುಮಾನ : ಪುಲ್ ಕುಡಿ ಮೆಲ್ಲಕ ನಡಿ ರಚ್ಚು ಸಾ|| ಗುಳಗಂದಿ, ತೃತೀಯ ಬಹುಮಾನ : ಊರಿಗೆ ಕಾಲಿಟ್ಟ ಉಡಾಳ ಭದ್ರ ಸಾ|| ಸುಳ್ಳ, ಹಾಗೂ ಎರಡು ಹಲ್ಲಿನ ಟಗರಿನ ಕಾಳಗ, ಪ್ರಥಮ ಬಹುಮಾನ : ಮಣಿಕಂಠ ಸಾ || ಶಿರೋಳ, ದ್ವಿತೀಯ ಬಹುಮಾನ : ಅಗಸ್ತ್ಯ ಸಾ|| ಕಾತರಕಿ, ತೃತೀಯ ಬಹುಮಾನ : ಭಜರಂಗಿ ಅಲಿಯಾಸ್ ನೀಲಕಂಠ ಸಾ|| ಕೊಣ್ಣೂರ, ಹಾಗೂ ನಾಲ್ಕು ಹಲ್ಲಿನ ಟಗರಿನ ಕಾಳಗ, ಪ್ರಥಮ ಬಹುಮಾನ : ಜಯಭೀಮ್ ನೀಲಗುಂದ ಗಿಡ್ಡ, ದ್ವಿತೀಯ ಬಹುಮಾನ : ಶ್ರೀ ಸಿದ್ದೇಶ್ವರ ಅಮಾಸಿ ಸಾ|| ಶಾಂತಗೇರಿ, ತೃತೀಯ ಬಹುಮಾನ : ಜೆ ಬಿ ಕಿಂಗ್ ಕಲ್ಲಾಪೂರ್ ಬಸವಣ್ಣ (ಕರಿಯ) ಹಾಗೂ ಓಪನ್ (ಮುಕ್ತ) ಟಗರಿನ ಕಾಳಗ, ಪ್ರಥಮ ಬಹುಮಾನ : ಭಜರಂಗಿ ಸಾಮ್ರಾಜ್ಯದ ಅಧಿಪತಿ ರಾಮ ಸಾ|| ಬೇಲೂರು, ದ್ವಿತೀಯ ಬಹುಮಾನ : ನರಗುಂದ ಮೈಲಾರಿ ಅಲಿಯಾಸ್ ಗಜ, ತೃತೀಯ ಬಹುಮಾನ : ಹುಲಿಗೆಮ್ಮದೇವಿ ಬಾದಾಮಿ ಡಾನ್ ಪಡೆಯಲಾಯಿತು.

ದಿ. 13 ಮತ್ತು 14 ರವರಿಗೆ ಸತತ ಎರಡು ದಿನಗಳವರೆಗೆ ಸುದೀರ್ಘ ಕಾರ್ಯಕ್ರಮ ಏರ್ಪಟ್ಟಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮನ್ನಿರಂಜನ ಗುರುಬಸವ ಮಹಾ ಸ್ವಾಮಿಗಳು ಶಿರೋಳ ಹಾಗೂ ನರಗುಂದ ಪತ್ರಿವನ ಮಠದ ಶ್ರೀಗಳು, ಸಮ್ಮುಖವನ್ನ ಅಭಿನವ ಯಚ್ಚರಸ್ವಾಮಿಗಳು ವಹಿಸಿದ್ದರು, ಹಾಗೂ ಮೈದಾನ ಉದ್ಘಾಟನೆಯನ್ನು ಶ್ರೀ ಮ.ನಿ. ಪ್ರ ಗುರುಬಸವ ಮಹಾಸ್ವಾಮಿಗಳು ಹಾಗೂ ಅಭಿನವ ಯಚ್ಚರಸ್ವಾಮಿಗಳು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಲಸಾಬ್ ಅರಗಂಜಿ, ಗೌರವಾಧ್ಯಕ್ಷತೆ ಶಿವನಗೌಡ ಪಾಟೀಲ, ಮುಖ್ಯ ಅತಿಥಿಗಳಾಗಿ ಡಿ ವೈ ಕಾಡಪ್ಪನವರ, ಪ್ರಕಾಶಗೌಡ ತಿರಕನಗೌಡ್ರ ಹಾಗೂ ರವಿ ಹಿರೇಮಠ, ಅತಿಥಿಗಳಾಗಿ ಈಶ್ವರಗೌಡ ತಿರಕನಗೌಡ್ರ, ಮುರುಗಯ್ಯಾ ವಸ್ತ್ರದ, ಬಸಯ್ಯ ಲಿಂ ಮಠದ, ಹಣಮಂತ ಕಾಡಪ್ಪನವರ, ಶರಣಪ್ಪ ಕಾಡಪ್ಪನವರ, ಬಸವರಾಜ ಹೂಗಾರ, ಶರಣಪ್ಪಗೌಡ ತಿರಕನಗೌಡ್ರ, ನಜೀರ್ ಚಳ್ಳಮರದ, ಸೋಮರೆಡ್ಡಿ ರಿತ್ತಿ, ಮೈಲಾರಪ್ಪ ಹಿರೇಮನಿ ಮತ್ತು ಗ್ರಾಮದ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ದೈಹಿಕ ಶಿಕ್ಷಕರಾದ ಶರಣಯ್ಯ ಹಿರೇಮಠ ಅವರು ನೆರವೇರಿಸಿದರು.
ಸ್ಪರ್ಧೆಗೆ ಬಹುಮಾನ ವಿತರಿಣೆ ಮಾಡಿದ, ಟ್ರೋಫಿ ಕೊಡುಗೆ ನೀಡಿದ ಎಲ್ಲ ಗಣ್ಯರಿಗೆ ಸನ್ಮಾನ ಮಾಡುವ ಮೂಲಕ ಹಾಗೂ ಪ್ರೋತ್ಸಾಹಿಸಿದ ಗ್ರಾಮದ ಎಲ್ಲಾ ಯುವಕ ಮಿತ್ರರಿಗೂ, ಕ್ರೀಡಾ ಪ್ರೇಮಿಗಳಿಗೂ ದುರ್ಗಾದೇವಿ ಯುವಕ ಮಂಡಳದವರು ಧನ್ಯವಾದ ಅರ್ಪಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!