ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಕತ್ತು ಹಿಸುಕಿ ಕೊಂದ ಹೆಂಡತಿ..!

0
Spread the love

ಬೆಂಗಳೂರು: ಹೆಂಡತಿಯೇ ಗಂಡನನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಮಹೇಶ್ ಕೊಲೆಯಾದ ದುರ್ದೈವಿ. ಹಾಸನ ಮೂಲದ ಮಹೇಶ್ ಹಾಗೂ ತೇಜಸ್ವಿನಿ ಕೆಲ ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದರು. ಮಹೇಶ್ ಆಟೋ ಚಾಲಕನಾಗಿದ್ದ. ತೇಜಸ್ವಿನಿ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ಮಧ್ಯೆ ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಕೌಟುಂಬಿಕ ಕಲಹವಿತ್ತು.

Advertisement

ಕಳೆದ ಆಗಸ್ಟ್ 9ರಂದು ಮಹೇಶ್ ಕೆಲಸಕ್ಕೆ ಹೋಗಿದ್ದಾಗ ಗಜೇಂದ್ರ ಮನೆಗೆ ಬಂದಿದ್ದಾನೆ. ಮಧ್ಯಾಹ್ನ ಮಹೇಶ್ ಮನೆಗೆ ಬಂದಾಗ ಗಜೇಂದ್ರ ಹೆಂಡತಿ ಜೊತೆ ಮನೆಯಲ್ಲಿದ್ದ. ಈ ವೇಳೆ ಮಹೇಶ್ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಗಜೇಂದ್ರ ಜಗಳ ಬಿಡಿಸಲು ಬಂದಾಗ ಆತನಿಗೂ ಥಳಿಸಿದ್ದಾನೆ. ಆಗ ಗಜೇಂದ್ರ ಹಾಗೂ ತೇಜಸ್ವಿನಿ ಸೇರಿ ಮಹೇಶ್ ಕುತ್ತಿಗೆ ಹಿಡಿದು ಹತ್ಯೆ ಮಾಡಿದ್ದಾರೆ.

ತೇಜಸ್ವಿನಿ ಗಂಡ ಮಹೇಶ್ ಕೊಲೆಯಾದ ಬಳಿಕ ಗಜೇಂದ್ರ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಪತ್ನಿ, ನನ್ನ ಗಂಡ ಮಹೇಶ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ನಾಟಕ ಮಾಡಿದ್ದಾಳೆ. ಜೋರಾಗಿ ಚೀರಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಡ್ರಾಮಾ ಮಾಡಿದ್ದಾಳೆ. ವೈಟ್ ಫೀಲ್ಡ್ ಪೊಲೀಸರು ಈ ಘಟನೆಯ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ಪೊಲೀಸರ ವಿಚಾರಣೆ ವೇಳೆ ಪ್ರಿಯತಮ ಹಾಗೂ ಪತ್ನಿಯ ಕಳ್ಳಾಟ ಬಯಲಾಗಿದೆ.


Spread the love

LEAVE A REPLY

Please enter your comment!
Please enter your name here