ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ಅಡವಿಬಸಯ್ಯ ತೋಟದ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಕನ್ನಡಾಂಬೆ ಯುವಕರ ಸಂಘ ಮೈನಹಳ್ಳಿ ಹಾಗೂ ಯುವ ಜಾಗೃತಿ ಪತ್ರಿಕಾ ಬಳಗ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಸರಕಾರಿ ನೌಕರರ ಭವನ ಕೊಪ್ಪಳದಲ್ಲಿ ಸಾಧಕ ಸಂಪನ್ನ ಮೈನಹಳ್ಳಿಯ ಡಾ. ಷಣ್ಮುಖಯ್ಯ ತೋಟದ ಅವರ ಅಭಿನಂದನಾ ಗ್ರಂಥ ಹಾಗೂ ಅಮೃತಗಳಿಗೆ ಕವನ ಸಂಕಲನ ಲೋಕಾರ್ಪಣೆ ಸಮಾರಂಭ ನಡೆಯಲಿದೆ.
Advertisement
ಸಮಾರಂಭದಲ್ಲಿ ಸಾಧಕರಿಗೆ ಕೊಡಮಾಡಲ್ಪಡುವ 2024ನೇ ಸಾಲಿನ ಶ್ರೀಮತಿ ಗಂಗಮ್ಮ ಅಡವಿಬಸಯ್ಯ ತೋಟದ ಸ್ಮಾರಕ ಪ್ರಶಸ್ತಿಗೆ ಜನಪದ ಕ್ಷೇತ್ರದಲ್ಲಿ ಸಾಧನೆಗೈದಿರುವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಜನಪದ ಕಲಾವಿದ ಗವಿಶಿದ್ಧಯ್ಯ ಹಳ್ಳಿಕೇರಿಮಠ ಅವರನ್ನು ಆಯ್ಕೆ ಮಾಡಲಾಗಿದೆ.