HomeKarnataka News69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ - ಇಲ್ಲಿದೆ ಪುರಸ್ಕೃತರ ಪಟ್ಟಿ!

69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – ಇಲ್ಲಿದೆ ಪುರಸ್ಕೃತರ ಪಟ್ಟಿ!

For Dai;y Updates Join Our whatsapp Group

Spread the love

ಬೆಂಗಳೂರು: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಇಂದು ರಾಜ್ಯ ಸರ್ಕಾರವು ಇಂದು ಪ್ರಕಟಿಸಿದೆ.

ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ 50 ಸದಸ್ಯರಿರುವ ಆಯ್ಕೆ ಸಲಹಾ ಸಮಿತಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿತ್ತು. ಒಟ್ಟು 1575 ಭೌತಿಕ ಅರ್ಜಿಗಳು ಬಂದಿದ್ದವು. ಇದಲ್ಲದೇ ಸೇವಾ ಸಿಂಧೂ ಮೂಲಕ 1309 ಜನರಿಗಾಗಿ 7,438 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಇವುಗಳನ್ನೆಲ್ಲಾ ಕೂಲಂಕುಷವಾಗಿ ಪರಿಶೀಲನೆ ಮಾಡಿ ಅರ್ಹರ ಆಯ್ಕೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ” ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿದ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ. ಈ ವರ್ಷ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷ ಆಗಿರುವುದರಿಂದ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ -50 ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು 50 ಸಾಧಕ ಮಹಿಳೆಯರಿಗೆ ಮತ್ತು 50 ಪುರುಷರಿಗೆ ನೀಡಲಾಗುತ್ತಿದೆ.

ಇದರಿಂದ 69 + 100 ಒಟ್ಟು 169 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ” ಎಂದು ತಿಳಿಸಿದರು. ಸುವರ್ಣ ಸಂಭ್ರಮ ಪ್ರಶಸ್ತಿಯ ಮೊತ್ತ 50,000 ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಅರ್ಜಿಯನ್ನು ಹಾಕದ ಎಲೆಮರೆಯ ಕಾಯಿಯಂತೆ, ಸೇವೆ ಸಲ್ಲಿಸಿರುವ 20ಕ್ಕೂ ಹೆಚ್ಚು ಮಂದಿಯನ್ನು ಸಹ ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ. ಬಯಲಾಟ ಕ್ಷೇತ್ರದಲ್ಲಿ 92 ವರ್ಷದ ನಾರಾಯಣಪ್ಪ ಶಿಳ್ಳೇಕ್ಯಾತ, ವಿಜಯನಗರ ಜಿಲ್ಲೆ ಇವರ ಹೆಸರನ್ನು ಸಹ ಪರಿಗಣಿಸಲಾಗಿದೆ. ಜಾನಪದ ಕ್ಷೇತ್ರದಲ್ಲಿ ಅಂದಕಲಾವಿದರಾದ ನರಸಿಂಹಲು, ಬೀದರ್ ಜಿಲ್ಲೆ ಇವರನ್ನು ಸಹ ಪರಿಗಣಿಸಲಾಗಿದೆ. 13 ಮಹಿಳೆಯರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಜಾನಪದ:
ಇಮಾಮಸಾಬ್‌ ಎಂ ವಲ್ಲೆಪನವರ – ಧಾರವಾಡ
ಅಶ್ವ ರಾಮಣ್ಣ – ಬಳ್ಳಾರಿ
ಕುಮಾರಯ್ಯ – ಹಾಸನ
ವೀರಭದ್ರಯ್ಯ – ಚಿಕ್ಕಬಳ್ಳಾಪುರ
ನರಸಿಂಹಲು (ಅಂಧ ಕಲಾವಿದ) – ಬೀದರ್‌
ಬಸವರಾಜ ಸಂಗಪ್ಪ ಹಾರಿವಾಳ – ವಿಜಯಪುರ
ಮತಿ ಎಸ್ ಜಿ ಲಕ್ಷ್ಮೀದೇವಮ್ಮ -ಚಿಕ್ಕಮಗಳೂರು
ಪಿಚ್ಚಳ್ಳಿ ನಿವಾಸ – ಕೋಲಾರ
ಲೋಕಯ್ಯ ಶೇರ (ಭೂತಾರಾಧನೆ) – ದಕ್ಷಿಣ ಕನ್ನಡ

ಶಿಲ್ಪಕಲೆ:
ಅರುಣ್‌ ಯೋಗಿರಾಜ್‌
ಬಸವರಾಜ್‌ ಬಡಿಗೇರ್‌

ಕ್ಷೇತ್ರ – ಚಲನಚಿತ್ರ /ಕಿರುತೆರೆ:
ಹೇಮಾ ಚೌದರಿ – ಬೆಂಗಳೂರು
ಎಂ. ಎಸ್. ನರಸಿಂಹಮೂರ್ತಿ – ಬೆಂಗಳೂರು

ಕ್ಷೇತ್ರ –ಸಂಗೀತ:
ಪಿ ರಾಜಗೋಪಾಲ – ಮಂಡ್ಯ
ಎ.ಎನ್ ಸದಾಶಿವಪ್ಪ – ರಾಯಚೂರು
ಕ್ಷೇತ್ರ-ನೃತ್ಯ
ವಿದುಷಿ ಲಲಿತಾ ರಾವ್ -ಮೈಸೂರು
ಕ್ಷೇತ್ರ- ಆಡಳಿತ
ಎಸ್.‌ ವಿ. ರಂಗನಾಥ್‌ ಭಾ.ಆ.ಸೇ (ನಿ) – ಬೆಂಗಳೂರು

ಕ್ಷೇತ್ರ-ವೈದ್ಯಕೀಯ:
ಡಾ. ಜಿ.ಬಿ. ಬಿಡಿನಹಾಳ – ಗದಗ
ಡಾ. ಮೈಸೂರು ಸತ್ಯನಾರಾಯಣ – ಮೈಸೂರು
ಡಾ ಲಕ್ಷ್ಮಣ್ ಹನುಮಪ್ಪ ಬಿದರಿ -ವಿಜಯಪುರ
ಕ್ಷೇತ್ರ- ಸಮಾಜಸೇವೆ
ವೀರಸಂಗಯ್ಯ – ವಿಜಯನಗರ
ಹೀರಾಚಂದ್‍ ವಾಗ್ಮಾರೆ – ಬೀದರ್‌
ಮತಿ ಮಲ್ಲಮ್ಮ ಸೂಲಗಿತ್ತಿ – ರಾಯಚೂರು
ದಿಲೀಪ್ ಕುಮಾರ್ – ಚಿತ್ರದುರ್ಗ

ಕ್ಷೇತ್ರ- ಸಂಕೀರ್ಣ:
ಹುಲಿಕಲ್ ನಟರಾಜ – ತುಮಕೂರು
ಡಾ. ಹೆಚ್.ಆರ್.‌ ಸ್ವಾಮಿ – ಚಿತ್ರದುರ್ಗ
ಆ.ನ ಪ್ರಹ್ಲಾದ ರಾವ್ – ಕೋಲಾರ
ಕೆ. ಅಜೀತ್ ಕುಮಾರ್ ರೈ – ಬೆಂಗಳೂರು
ಇರ್ಫಾನ್ ರಜಾಕ್ (ವಾಸ್ತುಶಿಲ್ಪ) – ಬೆಂಗಳೂರು
ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ – ಹಾವೇರಿ

ಕ್ಷೇತ್ರ- ಹೊರದೇಶ-ಹೊರನಾಡು:
ಕನ್ಹಯ್ಯ ನಾಯ್ಡು – ಆಂಧ್ರ
ಡಾ. ತುಂಬೆ ಮೊಹಿಯುದ್ದೀನ್‌ – ಯುಎಇ
ಚಂದ್ರಶೇಖರ ನಾಯಕ್ – ಅಮೇರಿಕಾ

ಪರಿಸರ:
ಅಲ್ಮಿತ್ತಾ ಪಟೇಲ್‌ – ಬೆಂಗಳೂರು
ಕೃಷಿ:
ಶಿವನಾಪುರ ರಮೇಶ್‌ – ಬೆಂಗಳೂರು ಗ್ರಾಮಾಂತರ
ಪುಟ್ಟೀರಮ್ಮ – ಚಾಮರಾಜನಗರ
ಮಾಧ್ಯಮ:
ಎನ್‌ಎಸ್‌ ಶಂಕರ್‌ – ದಾವಣಗೆರೆ
ಸನತ್‌ ಕುಮಾರ್‌ ಬೆಳಗಲಿ – ಬಾಗಲಕೋಟೆ
ಎಜಿ ಕಾರಟಗಿ – ಕೊಪ್ಪಳ
ರಾಮಕೃಷ್ಣ ಬಡಶೇಶಿ – ಕಲಬುರಗಿ

ವಿಜ್ಞಾನ ತಂತ್ರಜ್ಞಾನ:
ಪ್ರೊ ಟಿವಿ ರಾಮಚಂದ್ರ – ಬೆಂಗಳೂರು
ಸುಬ್ಬಯ್ಯ ಅರುಣನ್‌ – ಬೆಂಗಳೂರು
ಸಹಕಾರ:
ವಿರೂಪಾಕ್ಷಪ್ಪ ನೇಕಾರ – ಬಳ್ಳಾರಿ
ಯಕ್ಷಗಾನ:
ಕೇಶವ್‌ ಹೆಗಡೆ – ಉತ್ತರ ಕನ್ನಡ
ಸೀತಾರಾಮ ತೋಳ್ಪಾಡಿ – ದಕ್ಷಿಣ ಕನ್ನಡ

ಬಯಲಾಟ:
ಸಿದ್ದಪ್ಪ ಕರಿಯಪ್ಪ ಕುರಿ (ಅಂಧ ಕಲಾವಿದ) – ಬಾಗಲಕೋಟೆ
ನಾರಾಯಣಪ್ಪ ಶಿಳ್ಳೆಕ್ಯಾತ – ವಿಜಯನಗರ
ರಂಗಭೂಮಿ
ಸರಸ್ವತಿ ಜಯಲೈಕ ಬೇಗಂ – ಯಾದಗಿರಿ
ಓಬಳೇಶ್‌ ಎಚ್‌ಬಿ – ಚಿತ್ರದುರ್ಗ
ಭಾಗ್ಯಶ್ರೀ ರವಿ – ಕೋಲಾರ
ಡಿ ರಾಮು – ಮೈಸೂರು
ಜನಾರ್ಧನ್‌ ಎಚ್ – ಮೈಸೂರು
ಹನುಮಾನದಾಸ ವ ಪವಾರ – ಬಾಗಲಕೋಟೆ

ಸಾಹಿತ್ಯ:
ಬಿಟಿ ಲಲಿತಾನಾಯಕ್‌ – ಚಿಕ್ಕಮಗಳೂರು
ಅಲ್ಲಮಪ್ರಭು ಬೆಟ್ಟದೂರು – ಕೊಪ್ಪಳ
ಡಾ ಎಂ ವೀರಪ್ಪ ಮೋಯ್ಲಿ – ಉಡುಪಿ
ಹನುಮಂತರಾವ್‌ ದೊಡ್ಡಮನಿ – ಕಲಬುರಗಿ
ಡಾಬಾಳಾಸಾಹೇಬ್‌ ಲೋಕಾಪುರ – ಬೆಳಗಾವಿ
ಬೈರಮಂಗಲರಾಮೇಗೌಡ – ರಾಮನಗರ
ಡಾಪ್ರಶಾಂತ್‌ ಮಾಡ್ತಾ – ದಕ್ಷಿಣ ಕನ್ನಡ

ಶಿಕ್ಷಣ:
ಡಾ.ವಿ ಕಮಲಮ್ಮ – ಬೆಂಗಳೂರು
ಡಾ. ರಾಜೇಂದ್ರ ಶೆಟ್ಟಿ – ದಕ್ಷಿಣ ಕನ್ನಡ
ಡಾ ಪದ್ಮಶೇಖರ್‌ – ಕೊಡಗು
ಕ್ರೀಡೆ:
ಜೂಡ್‌ ಫೆಲಿಕ್ಸ್‌ ಸೆಬಾಸ್ಟಿಯನ್ – ಬೆಂಗಳೂರು
ಗೌರತ್‌ ವರ್ಮ – ರಾಮನಗರ
ಆರ್‌ ಉಮಾದೇವಿ – ಬೆಂಗಳೂರು

ನ್ಯಾಯಾಂಗ:
ಬಾಲನ್‌ – ಕೋಲಾರ
ಚಿತ್ರಕತೆ:
ಪ್ರಭು ಹರಸೂರು – ತುಮಕೂರು
ಕರಕುಶಲ:
ಚಂದ್ರಶೇಖರ ಸಿರಿವಂತೆ – ಶಿವಮೊಗ್ಗ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!