ಲಕ್ಕುಂಡಿ: ಇಂದು ಸಚಿವ ಎಚ್.ಕೆ.ಪಾಟೀಲ್ ಲಕ್ಕುಂಡಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ, ನಿಧಿ ಸಿಕ್ಕ ಕುಟುಂಬದ ಮಾತು ಈಗ ಜನರ ಮನಸ್ಸು ಕದಲಿಸಿದೆ. ತಾಯಿ ಕಸ್ತೂರವ್ವ ರಿತ್ತಿ ಮಾತನಾಡಿ, “ನಮಗೆ ನಿಧಿ ಬೇಡ. ಆ ಚಿನ್ನ ಬೇಡ. ಆ ಜಾಗ ಕೂಡ ಬೇಡ” ಎಂದು ಭಾವುಕರಾಗಿದ್ದಾರೆ.
“ನಮಗೆ ಬೇಕಾಗಿರುವುದು ಮನೆ. ಮಗನಿಗೆ ಶಿಕ್ಷಣ. ಮುಂದೆ ಸರ್ಕಾರಿ ಉದ್ಯೋಗ. ಇದಕ್ಕಿಂತ ಹೆಚ್ಚು ಏನೂ ಬೇಡ” ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
“ನಿಧಿ ಸಿಕ್ಕ ಜಾಗದಲ್ಲಿ ಭಯವಾಗುತ್ತದೆ. ಅಲ್ಲಿ ಉಳಿಯಲು ಸಾಧ್ಯವಿಲ್ಲ. ಬೇರೆ ಕಡೆ ಜಾಗ ಕೊಡಿ, ಮನೆ ಕಟ್ಟಿಸಿಕೊಡಿ” ಎಂದು ಕುಟುಂಬ ಸರ್ಕಾರಕ್ಕೆ ನೇರ ಮನವಿ ಮಾಡಿದೆ.
ಕುಟುಂಬದ ನಂಬಿಕೆಯ ಪ್ರಕಾರ, “ನಿಧಿ ಯಾರಿಗೂ ಒಳ್ಳೆಯದಾಗಿಲ್ಲ. ಕೊಟ್ಟವರು ಕೊಟ್ಟಿದ್ದಾರೆ, ಇಟ್ಟುಕೊಂಡವರು ನಷ್ಟ ಅನುಭವಿಸಿದ್ದಾರೆ. ನಿಧಿ ಅನ್ನೋದೇ ಅಪಶಕುನ. ನಮಗೆ ಅದು ದಕ್ಕೋದಿಲ್ಲ” ಎಂಬ ಭಾವನೆ ಮನೆಮಾತಾಗಿದೆ.
ಇಷ್ಟೆಲ್ಲಾ ಆತಂಕದ ನಡುವೆ, “ಸರ್ಕಾರದವರು ನಮ್ಮ ಮಗಳಿಗೆ ನೆರಳಾಗಿ ನಿಲ್ಲಬೇಕು. ನಮ್ಮ ಬದುಕಿಗೆ ಭದ್ರತೆ ಕೊಡಬೇಕು” ಎಂದು ರಿತ್ತಿ ಕುಟುಂಭಸ್ಥರು ಬೇಡಿಕೆ ಇಟ್ಟಿದ್ದಾರೆ.



