ರಿಯಾಯಿತಿ ದರದ ಬೀಜ ಮಾರಾಟ ಪ್ರಾರಂಭ

0
Commencement of discounted seed sale
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮುಂಗಾರು ಹಂಗಾಮಿನ ರಿಯಾಯಿತಿ ದರದ ಬಿತ್ತನೆ ಬೀಜ ಮಾರಾಟವನ್ನು ಗದಗ-ಬೆಟಗೇರಿ ಹೋಬಳಿ ಕೃಷಿ ಕೇಂದ್ರದ ಕೃಷಿ ಅಧಿಕಾರಿ ವೀರಣ್ಣ ಗಡಾದ ಹೆಸರು ಹಾಗೂ ತೊಗರಿ ಬೀಜಗಳನ್ನು ರೈತರಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂಗಾರು ಹಂಗಾಮು ಜೂನ್ 6ರಿಂದ ಪ್ರಾರಂಭವಾಗುತ್ತಿದ್ದು, ರೈತರು ಭೂಮಿ ಸಂಪೂರ್ಣವಾಗಿ ತೇವಾಂಶ ಬಂದ ನಂತರ ಬಿತ್ತನೆ ಕಾರ್ಯ ಕೈಗೊಳ್ಳುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಜೀವ ರೆಡ್ಡಿ, ಮಲ್ಲಪ್ಪ ಹಾಗೂ ತಾಲೂಕಿನ ಅನೇಕ ರೈತರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here