ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಗರದ ಎಸ್ಟಿಪಿಎಂ ಬಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತನ್ನು ಉದ್ಘಾಟಿಸಿ, ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಶಾಲಾ ಮುಖ್ಯಸ್ಥೆ ಸ್ವಾತಿ ಉ. ಪೈ ಅವರು ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜೇಶ್ವರಿ ದಾನಪ್ಪನವರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ಶಿಸ್ತು, ಸಂಯಮ ಹಾಗೂ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅಗತ್ಯ. ಶಾಲಾ ಸಂಸತ್ತಿನ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಅರಿವು ಮೂಡುತ್ತದೆ ಎಂದರು.
ಶಾಲಾ ಸಂಸತ್ತಿನ ಜನರಲ್ ಸೆಕ್ರೆಟರಿಯಾಗಿ ಚಿನ್ಮಯಿ ಕಳಸಾಪುರ, ವೈಸ್ ಜನರಲ್ ಸೆಕ್ರೆಟರಿಯಾಗಿ ವಿಜನ್ ಅಗಡಿ ಆಯ್ಕೆಯಾಗಿದ್ದಾರೆ.
ಸಾಂಸ್ಕೃತಿಕ ವಿಭಾಗ: ದೃತಿ ದೇಸಾಯಿ, ನಿಖಿಲ ಗೌಡ ಪಾಟೀಲ
ಪರೀಕ್ಷಾ ವಿಭಾಗ: ವಿಕಾಸ ಕೋಟೆಗೌಡರ, ನೇಸರ ಸಂಶಿ
ಕ್ರೀಡಾ ವಿಭಾಗ: ಅದಿಫತ್ ಫಾತಿಮಾ, ಶ್ರೀಧರ ಇಟಗಿ
ಆರೋಗ್ಯ ವಿಭಾಗ: ಶ್ರೇಯಸ ಮೆದಾರ, ಖುಷಿ ಹಡಪದ
ಪ್ರವಾಸ ವಿಭಾಗ: ಪ್ರಾರ್ಥನಾ ಪಾಟೀಲ, ಸಿದ್ದಾರ್ಥ ಗಡ್ಡದೇವರಮಠ
ಸಂಭ್ರಮ ಶನಿವಾರ ವಿಭಾಗ: ಆರಾಧ್ಯ ವೆರ್ಣೇಕರ, ಚಿನ್ಮಯ ಶಿರಹಟ್ಟಿ
ಕೋ-ಆರ್ಡಿನೇಟರ್ ಸಾರಾ ಹಾಗೂ ವಿನಾಯಕ ದೊಡ್ಡಮನಿ ಅವರು ಚುನಾಯಿತ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ಮತ್ತು ಕ್ಯಾಪ್ ವಿತರಿಸಿ ಶುಭ ಹಾರೈಸಿದರು. ಮಂಜುಳಾ ಪಾಟೀಲ ಅವರು ಚುನಾಯಿತ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರಕಟಿಸಿದರು.
ಶಿಕ್ಷಕಿಯರಾದ ವಿಜಯಲಕ್ಷ್ಮಿ ದೇಸಾಯಿ, ಲೀಲಾ ಬೆಳಗಟ್ಟಿ, ಆಶಾ ಜಾದವ್ ಹಾಗೂ ಪವಿತ್ರಾ ಕಾರಬರಿ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಕೀರ್ತಿಶ್ರೀ ಪಾಟೀಲ ಹಾಗೂ ವಿಜಯಲಕ್ಷ್ಮಿ ಎಂ. ನಿರೂಪಿಸಿದರು. ಸಿಮ್ರಾನ್ ನಡುಗೀರ್ ಸ್ವಾಗತಿಸಿದರು. ವೀಣಾ ಜಮನೂರ್ ವಂದಿಸಿದರು.



