HomePolitics Newsಚುನಾವಣೆಯ ಪರ್ವ-ದೇಶದ ಗರ್ವ

ಚುನಾವಣೆಯ ಪರ್ವ-ದೇಶದ ಗರ್ವ

Spread the love

ಈ ಚುನಾವಣೆಯು ಭಾರತಕ್ಕೆ ಶ್ರೇಷ್ಠ ಸುಭದ್ರ ಸರ್ಕಾರವನ್ನು ನೀಡಲು ಅತ್ಯವಶ್ಯಕವಾಗಿದೆ. ಭಾರತೀಯ ನಾಗರಿಕರಾದ ನಾವೆಲ್ಲರೂ ಸುಭದ್ರ, ಉತ್ತಮ ಸರ್ಕಾರವನ್ನು ನೀಡಲು `ಮತದಾನ’ ಎಂಬ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಬೇಕಾಗಿದೆ.

ಹಾಗಾದರೆ ಈ ಕರ್ತವ್ಯವನ್ನು ನಾವು ಹಬ್ಬದಂತೆ ವಿಜೃಂಭಣೆಯಿಂದ ಮಾಡಬೇಕು. ಯಾವ ರೀತಿ ಯುಗಾದಿ, ಬಸವ ಜಯಂತಿ, ಹೋಳಿ ಹಬ್ಬ, ರಂಜಾನ್, ಗ್ರಾಮದೇವಿ ಜಾತ್ರೆ, ಉರುಸು ಹೀಗೆ ಹಲವಾರು ಹಬ್ಬಗಳನ್ನು, ಜಾತ್ರೆಗಳನ್ನು ಊರಿನಲ್ಲಿ ವಿಜೃಂಭಣೆಯಿಂದ ಮಾಡುತ್ತೇವೆಯೋ ಅದೇ ರೀತಿ ಪ್ರಜಾಪ್ರಭುತ್ವದ ಜಾತ್ರೆಯನ್ನು ಮತದಾನ ದಿನದಂದು (ಬರುವ ಮೇ 7)ಎಲ್ಲರೂ ದೇಶದಾದ್ಯಂತ ಸಂಭ್ರಮದಿಂದ ಆಚರಿಸಬೇಕಿದೆ.
ಈ ಚುನಾವಣೆ ಹಬ್ಬಕ್ಕೆ ನಾವೆಲ್ಲರೂ ಹೀಗೆ ಸಿದ್ಧರಾಗೋಣ.

* ಮತದಾನ ದಿನದಂದು ಭಾರತದ ಪ್ರತಿಯೊಬ್ಬ ಪ್ರಜೆ ಬೆಳಿಗ್ಗೆ ಬೇಗನೆ ಎದ್ದು `ನಮ್ಮ ನಡೆ ಮತಗಟ್ಟೆಯ ಕಡೆ-ನಮ್ಮ ಅಮೂಲ್ಯವಾದ ಮತದ ಹಕ್ಕನ್ನು ಚಲಾಯಿಸುವ ಕಡೆ’ ಎಂಬ ಮನೋಭಾವನೆಯನ್ನು ಹೊಂದಿ ಮತ ಚಲಾಯಿಸಲು ಮತಗಟ್ಟೆಗೆ ಹೋಗೋಣ.

* ನಮ್ಮ ಊರಿನ ಗ್ರಾಮದೇವಿ ಜಾತ್ರೆಗೆ ಬಂಧು-ಬಳಗವನ್ನು ಯಾವ ರೀತಿ ಆಹ್ವಾನ ನೀಡುತ್ತೇವೆ, ಆ ರೀತಿಯಲ್ಲಿಯೇ ಪ್ರಜಾಪ್ರಭುತ್ವ ಹಬ್ಬಕ್ಕೆ ಅಂದರೆ, ಮತದಾನ ಮಾಡಲಿಕ್ಕೆ ಮತಗಟ್ಟೆ ಕೇಂದ್ರದ ಕಡೆಗೆ ತಾವು ಬಂಧು-ಮಿತ್ರರು ಹಾಗೂ ಬಳಗವನ್ನೆಲ್ಲವನ್ನು ಕರೆದುಕೊಂಡು ಹೋಗಿ ಒಮ್ಮೆಲೇ ಸಾಲಲ್ಲಿ ನಿಂತು ಪ್ರಜಾತಂತ್ರದ ಯಶಸ್ಸಿಗೆ ಬಟನ್ ಒತ್ತಿ.

* ಜಾತ್ರೆಯಲ್ಲಿ ಎಲ್ಲರೂ ಸೇರಿ ತೇರನ್ನು ಎಳೆದಂತೆ ಇಲ್ಲಿ ಎಲ್ಲರೂ ಪ್ರಜಾಪ್ರಭುತ್ವವೆಂಬ ತೇರನ್ನು ತಮ್ಮ ಊರಿನಲ್ಲಿಯೇ ಅತಿ ಹೆಚ್ಚಿನ ವೋಟ್ ಮಾಡಿ. ಶೇಕಡಾವಾರು ಮತದಾನವನ್ನು ಹೆಚ್ಚಿಸುವ ಮೂಲಕ ಗೆಳೆಯರೆಲ್ಲ ಸೇರಿ ಎಳೆಯಿರಿ.

* ಕುಟುಂಬ ಸಮೇತ ಯಾವುದೇ ಮೋಜು ಮಸ್ತಿ, ಮನರಂಜನೆ, ಪ್ರವಾಸಿ ತಾಣಗಳಿಗೆ ಹೋಗದೇ ಮನೆಯಲ್ಲಿಯೇ ಇರಿ, ಮತದಾನ ಮಾಡಿ.

* ಅನ್ನದಾನ, ಅಕ್ಷರದಾನ, ನೇತ್ರದಾನ ಹೇಗೆ ಶ್ರೇಷ್ಠ ದಾನವೋ ಅದೇ ರೀತಿ ಮತದಾನ ಕೂಡ ಶ್ರೇಷ್ಠ ಕಾರ್ಯ.

* ನಗರದ ಜನ ಮೇ 7ರಂದು ಮನೆಯಿಂದ ಹೋರಗೆ ಬಂದು 100ಕ್ಕೆ 100ರಷ್ಟು ಮತದಾನ ಮಾಡುವ ಕಾಯಕ ಮಾಡುವದು.

* ಭಾರತೀಯರಾದ ಪ್ರತಿಯೊಬ್ಬರ ಮತ ಮೌಲ್ಯಯುತವಾದ್ದದ್ದು. ಅದನ್ನು ನಾನು ಮಾಡಿಯೇ ಮಾಡುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿ ಇರಿ.

* ನೀವು ಮತ ಹಾಕಿದರೆ ನೀವು ನಿಮ್ಮ ದೇಶದ ಹೀರೋ. ಮತ ಹಾಕದಿದ್ದರೆ ಜೀರೊ ಎಂದು ತಿಳಿಯಿರಿ.

* ಕೆಲವು ಸಾರಿ ಅಭ್ಯರ್ಥಿ ಒಂದು ಮತದ ಅಂತರದಿಂದ ಗೆದ್ದ ಉದಾಹರಣೆ ಇದೆ. ಆ ನಿರ್ಣಾಯಕ ಮತ ನಿಮ್ಮದೇ ಆಗಿರಬಹುದು. ಆದ್ದರಿಂದ ತಡ ಯಾಕೆ? ಬೇಗ ಹೋಗಿ ಮೇ ೭ರಂದು ಮತ ಹಾಕಿ.

* ಅಂಚೆ ಮತ ಪಡೆದವರು ಸರಿಯಾಗಿ ಎಲ್ಲ ನಿಯಮ ಪಾಲಿಸಿ, ಜೂನ್ ಮತ ಎಣಿಕೆಗೆ ಮೊದಲು ಚುನಾವಣಾಧಿಕಾರಿಗೆ ತಲುಪುವಂತೆ ಮತದಾನ ಮಾಡಿ.

* ನಮ್ಮ ದೇಶದಲ್ಲಿ ಅಂದಾಜು ಶೇ.30ರಷ್ಟು ಯುವ ಮತದಾರರು ಇದ್ದಾರೆ. ಇಂದಿನ ಯುವಕರೇ ನಾಳಿನ ನಾಯಕರು. ಆದ್ದರಿಂದ ನಿಮ್ಮ ನಾಯಕರನ್ನು ಕಾಯಾ, ವಾಚಾ, ಮನಸಾ ಯೋಗ್ಯತೆ, ಮಾನದಂಡದ ಆಧಾರದ ಮೇಲೆ ಆಯ್ಕೆ ಮಾಡಬೇಕು. ಯಾವುದೇ ಆಮಿಷಕ್ಕೆ ಒಳಗಾಗದೇ ತಮ್ಮ ಮತ ಹಾಕಿ.

* ಯುವಜನರೇ, ನಮ್ಮ ದೇಶದ ಸ್ಥಿರ ಸರ್ಕಾರ ತಮ್ಮ ಮತದಾನದ ಮೇಲೆ ನಿರ್ಧಾರ ಆಗಬಹುದು. ಆದ್ದರಿಂದ ಮೊದಲ ಸಾರಿ ಮತದಾನದ ಮಾಡುವವರು ಉತ್ಸಹದಿಂದ ಮತಗಟ್ಟೆಗೆ ಬನ್ನಿ. ನಿಮ್ಮ ಹಕ್ಕು ಚಲಾಯಿಸಿ. ದೈರ್ಯದಿಂದ ಹೇಳಿ, `ನನ್ನ ಮತ-ನನ್ನ ಹಕ್ಕು’ ಎಂದು.

ಬನ್ನಿ ಭಾರತೀಯರೇ, ಎಲ್ಲರೂ ಸೇರಿ ಪ್ರಜಾಪ್ರಭುತ್ವದ ಹಬ್ಬ ಮಾಡೋಣ. ಮತಹಾಕಿ, ಮತಗಟ್ಟೆಯಿಂದ ಹೊರಗೆ ಬಂದು ಕುಟುಂಬದ ಸಮೇತ ಸೆಲ್ಪಿ ತೆಗೆದುಕೊಳ್ಳೋಣ. ಜವಾಬ್ದಾರಿಯುತ ನಾಗರಿಕನಾಗಿ ನಾವು ಮತದಾನ ದಿನಾಂಕದಂದು ನಮ್ಮ ಕರ್ತವ್ಯ ಮಾಡೋಣ.
– ಅಜ್ಜಪ್ಪ ಅಂಗಡಿ.
ಬಿ.ಆರ್.ಪಿ, ಬೈಲಹೊಂಗಲ.

angadi


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!