Home Gadag News ಮದ್ಯದ ಅಂಗಡಿಯಲ್ಲಿ ಕಿರಿಕ್: ಓರ್ವನ ಮೇಲೆ ಮೂವರ ಹಲ್ಲೆ! ನಡುರಸ್ತೆಯಲ್ಲೇ ಮೂವರನ್ನು ಥಳಿಸಿದ ವಿಡಿಯೋ ಇಲ್ಲಿದೆ!

ಮದ್ಯದ ಅಂಗಡಿಯಲ್ಲಿ ಕಿರಿಕ್: ಓರ್ವನ ಮೇಲೆ ಮೂವರ ಹಲ್ಲೆ! ನಡುರಸ್ತೆಯಲ್ಲೇ ಮೂವರನ್ನು ಥಳಿಸಿದ ವಿಡಿಯೋ ಇಲ್ಲಿದೆ!

0
ಮದ್ಯದ ಅಂಗಡಿಯಲ್ಲಿ ಕಿರಿಕ್: ಓರ್ವನ ಮೇಲೆ ಮೂವರ ಹಲ್ಲೆ! ನಡುರಸ್ತೆಯಲ್ಲೇ ಮೂವರನ್ನು ಥಳಿಸಿದ ವಿಡಿಯೋ ಇಲ್ಲಿದೆ!
Spread the love

ಗದಗ:- ಎಣ್ಣೆ ಹೊಡೆಯುವ ವೇಳೆ ಕ್ಷುಲ್ಲಕ ವಿಚಾರಕ್ಕೆ ಓರ್ವನ ಮೇಲೆ ಮೂವರು ಹಲ್ಲೆ ನಡಸಿದ್ದರಿಂದ ಸಿಟ್ಟಾದ ಒಂದು ಗುಂಪು ಮೂವರನ್ನು ರಸ್ತೆಯಲ್ಲಿ ಉಳ್ಳಾಡಿಸಿ ಹೊಡೆದ ಘಟನೆ ಗದಗ ನಗರದ ಕಳಸಾಪೂರ ರಿಂಗ್ ರೋಡ್ ಬಳಿ ಜರುಗಿದೆ.

ಘಟನೆಯಲ್ಲಿ ತಾಜುದ್ದಿನ್, ಮುಸ್ತಾಪ್, ಕಾರ್ತಿಕ್ ಹಾಗೂ ದುರಗಪ್ಪ ಎಂಬ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜುದ್ದಿನ್, ಮುಸ್ತಾಪ್, ಕಾರ್ತಿಕ್ ಎಂಬುವವರು ರಾಜ್ ಕಮಲ ವೈನ್ಸ್ ಅಂಗಡಿಯಲ್ಲಿ ಸಾರಾಯಿ ಕುಡಿಯುವಾಗ ದುರಗಪ್ಪ ಜೊತೆಗೆ ಸ್ನ್ಯಾಕ್ಸ್ ವಿಚಾರಕ್ಕೆ ಜಗಳ ತೆಗೆದಿದ್ದಾರೆ. ಅಷ್ಟೇ ಅಲ್ಲದೆ ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಸುದ್ದಿ ದುರ್ಗಪ್ಪನ ಕಡೆಯವರಿಗೆ ಗೊತ್ತಾಗಿ ಸರಿಸುಮಾರು 40 ಜನ ಸೇರಿ ಮೂವರ ಮೇಲೆ ಅಟ್ಯಾಕ್ ಮಾಡಿದ್ದಾರೆ.

ಕಲ್ಲು ದೊಣ್ಣೆಗಳಿಂದ ಸಿಕ್ಕ ಸಿಕ್ಕಲ್ಲೇ ಹಲ್ಲೆ ಮಾಡಿದ್ದಾರೆ. ಮಹಿಳೆಯರು ಸೇರಿ ಹಲವರಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ತಲೆ, ಕೈ ಮುಖದ ಭಾಗಕ್ಕೆ ಗಂಭೀರ ಗಾಯವಾಗಿವೆ.

ತಾಜುದ್ದೀನ್, ಮುಸ್ತಫಾ, ಕಾರ್ತಿಕ್ ಮೂವರು ಕೂತಿದ್ದ ಟೇಬಲ್ ನಲ್ಲಿನ ಸ್ನ್ಯಾಕ್ ಗೆ ದುರ್ಗಪ್ಪ ಕೈ ಹಾಕಿದ್ದ. ಸ್ನ್ಯಾಕ್ ಗೆ ಕೈ ಹಾಕಿದ್ದ ದುರ್ಗಪ್ಪನ ಜೊತೆಗೆ ತಾಜುದ್ದಿನ್ ಟೀಮ್ ಜಗಳವಾಡಿದೆ. ಜಗಳದ ವೇಳೆ ದುರ್ಗಪ್ಪನ ಮೇಲೆ ಬಾಟಲ್ ಗಳಿಂದ ತಾಜುದ್ದೀನ್ ಟೀಮ್ ಹಲ್ಲೆ ಮಾಡಿದ್ದಾರೆ. ಬಳಿಕ ದುರ್ಗಪ್ಪನ ಬೆಂಬಲಿಗರು ಬಂದು ತಾಜುದ್ದೀನ್, ಕಾರ್ತಿಕ, ಮುಸ್ತಫಾ, ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಗದಗ ಶಹರ ಠಾಣೆ ಪೊಲೀಸರು ಪರಿಶೀಲನೆ ಮಾಡಿದ್ದು, ಪರಿಸ್ಥಿತಿ ತಿಳಿಗೊಳಿಸಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.


Spread the love

LEAVE A REPLY

Please enter your comment!
Please enter your name here